Monday, February 2, 2026
Monday, February 2, 2026

ಈಗಿನ ಜಗತ್ತಿನಲ್ಲಿ ಸ್ರ್ರೀಪರ ಚಿಂತನೆ ಸೇರಿಸಿಕೊಳ್ಳಬೇಕು

Date:

ವಾತ್ಸ್ಯಾಯನ ಸೇರಿದಂತೆ ರಚಿಸಿದ ಗ್ರಂಥಗಳಲ್ಲಿ ಪುರುಷ ಪಾರಮ್ಯವಿದೆ ಎಂದು ಹೇಳಲಾಗುತ್ತದೆ. ಹೌದು, ಪುರುಷ ಪಾರಮ್ಯ ಇದೆ. ಆಗಿನ ಜಗತ್ತು ಹಾಗಿತ್ತು. ಈಗಿನ ಜಗತ್ತು ಬಿನ್ನವಾಗಿದೆ. ಹಾಗಂತ ವಾತ್ಸ್ಯಾಯನ ಕೃತಿಯನ್ನು ತಿದ್ದುವ ಹಾಗಿಲ್ಲ. ಅದನ್ನು ಒಪ್ಪಿಕೊಂಡು ಅದರ ಜೊತೆಗೆ ಸ್ತ್ರೀಪರವಾದ ವಿಚಾರವನ್ನು ಸೇರಿಸಿಕೊಂಡರಾಯಿತು ಎಂದು ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯ ಪ್ರಕಾಶನವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಹೊರತರಲಾದ ‘ವಾತ್ಸ್ಯಾಯನ ಕಾಮಸೂತ್ರ’ಕನ್ನಡ ಅನುವಾದ ( ಕನ್ನಡಕ್ಕೆ ಡಾ. ವಿಶ್ವನಾಥ ಕೃ.ಹಂಪಿಹೊಳಿ ) ಕೃತಿಯನ್ನು ಬಿಡುಗಡೆ ಮಾಡಿದರು.
ಪುರಾತನ ಕಾಲದಲ್ಲಿ ರಚನೆಯಾದ ಧರ್ಮಾರ್ಥ ಶಾಸ್ತ್ರಗಳನ್ನು ಪರಸ್ಪರ ಹೊಂದಾಣಿಕೆಯಿಂದ ನೋಡದೆ ತೆಗಳುವುದು ಆತ್ಮವಂಚನೆ, ಜ್ಞಾನ ವಂಚನೆ, ವಿದ್ಯಾ ವಂಚನೆಯಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಜಗತ್ತಿಗೆ ಕೊಟ್ಟ ಅತ್ಯಂತ ಜನಪ್ರಿಯ ಗ್ರಂಥಗಳಲ್ಲಿ ವಾತ್ಸ್ಯಾಯನ ಕಾಮಸೂತ್ರ ಕೂಡ ಒಂದು. ಜಗತ್ತಿಗೆ ಭಾಷೆಯನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿಕೊಟ್ಟವರು ನಾವು. ಬದುಕನ್ನು ನೋಡುವುದು ಹೇಗೆ ಎಂದು ಭಗವದ್ಗೀತೆಯ ಮೂಲಕ ತಿಳಿಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ರಂಗಭೂಮಿ ನಟ ಎಸ್. ಎನ್. ಸೇತುರಾಮ್, ವಿದ್ವಾಂಸರಾದ ವೀಣಾ ಬನ್ನಂಜೆ,ಕೃತಿಯ ಅನುವಾದಕರಾದ ಡಾ. ವಿಶ್ವನಾಥ ಕೃ.ಹಂಪಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...