ಮಳೆಗಾಲದ ಅಧಿವೇಶನದಲ್ಲಿ ತೋರಿದ ಅನುಚಿತ ವರ್ತನೆ ಗಾಗಿ 12 ಸದಸ್ಯರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ರಾಜ್ಯ ಸಭೆಯಲ್ಲಿ ಯಾವುದೇ ಕಲಾಪ ನಡೆಯಲಿಲ್ಲ. ಬೆಳಿಗ್ಗೆಯಿಂದ ಹಲವು ಸಲ ಮುಂದೂಡಿಕೆ ಕಂಡ ಸದನವು ಮಧ್ಯಾಹ್ನ 4 ಗಂಟೆಗೆ ಸೇರಿದಾಗ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಗದ್ದಲದ ನಡುವೆಯೇ ನಾಗಾಲ್ಯಾಂಡ್ ದುರ್ಘಟನೆ ಕುರಿತು ಹೇಳಿಕೆ ನೀಡಿದರು.
ಬಳಿಕ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಲೋಕಸಭೆಯಲ್ಲಿ ಫಾರ್ಮಾಸ್ಯುಟಿಕಲ್ ಶಿಕ್ಷಣ ಕ್ಷೇತ್ರದ ಸಂಸ್ಥೆಗಳಿಗೆ ವಿಶೇಷ ಸ್ಥಾನಮಾನ ನೀಡುವ ‘ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ( ತಿದ್ದುಪಡಿ) ವಿಧೇಯಕ 2021’ ಅನ್ನು ಮಂಡಿಸಲಾಯಿತು.
ರಾಜ್ಯಸಭೆಯಲ್ಲಿ ಮತ್ತೆ ಗದ್ದಲ : ಕಲಾಪ ಮುಂದೂಡಿಕೆ
Date: