Monday, December 15, 2025
Monday, December 15, 2025

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

Date:

ಹತ್ತನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ ಕಡಿತಗೊಂಡ ಪಠ್ಯ ಮಾಹಿತಿ

ಕೋವಿಡ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 2021 -22 ನೇ ಸಾಲಿಗೆ ಪರೀಕ್ಷೆಗೆ ಪರಿಗಣಿಸಬಹುದಾದ ಮತ್ತು ಪರಿಗಣಿಸಬಾರದ ಪಠ್ಯಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬಿಡುಗಡೆ ಮಾಡಿದೆ.
ಕಡಿತಗೊಳಿಸಿರುವ ಪಠ್ಯಗಳ ಮಾಹಿತಿ,

ಪ್ರಥಮ ಭಾಷೆ ಕನ್ನಡದಲ್ಲಿ ಎಂಟನೇ ಅಧ್ಯಾಯ ‘ಸುಕುಮಾರಸ್ವಾಮಿ ಕತೆ’ ಹಾಗೂ ‘ಕೆಮ್ಮನೆ ಮೀಸೆವೊತ್ತೋನೆ’ ಪದ್ಯವನ್ನು ಬೋಧನೆಯಿಂದ ಕೈಬಿಡಲಾಗಿದೆ. ಇಂಗ್ಲಿಷ್ ನಲ್ಲಿ ಡಿಸ್ಕವರಿ, ಸೈನ್ಸ್ ಅಂಡ್ ಹೋಪ್ ಆಫ್ ಸರ್ವೈವಲ್, ದಿ ಬರ್ಡ್ ಆಫ್ ಹ್ಯಾಪಿನೆಸ್, ಎಂಬ ಪಾಠಗಳು ಹಾಗೂ ನೆಟ್ ಆಫ್ ದಿ ಟೆಂಪೆಸ್ಟ್, ಆಫ್ ಟು ಔಟರ್ ಸ್ಪೇಸ್ ಟುಮಾರೋ ಮಾರ್ನಿಂಗ್, ಎಂಬ ಪದ್ಯಗಳನ್ನು ಬೋಧನೆಗೆ ಪರಿಗಣಿಸಿಲ್ಲ.
8ನೇ ತರಗತಿಯಲ್ಲಿ ಈಗಾಗಲೇ ಅಧ್ಯಯನ ಮಾಡಿದ್ದು, ಅದರ ಮುಂದುವರಿಕೆ ಭಾಗವಾಗಿರುವ ಹಿಂದಿ ಭಾಷೆಯ ದುನಿಯಾ ಮೇ ಪಹಲಾ ಮಕಾನ್, ರೋಬೋಟ್, ಹಾಗೂ ಬಾಲ್ ಶಕಿತ್, ಪಠ್ಯಗಳನ್ನು ಬೋಧಿಸದಂತೆ ಸೂಚಿಸಲಾಗಿದೆ.
ಗಣಿತ ವಿಷಯದ 8ನೇ ಅಧ್ಯಾಯ ವಾಸ್ತವ ಸಂಖ್ಯೆಗಳು, 9ನೇ ಅಧ್ಯಾಯ ಬಹು ಪದೋಕ್ತಿಗಳು, ಹಾಗೂ ಸಂಭವನೀಯತೆ, ಎಂಬ 14ನೇ ಅಧ್ಯಾಯವನ್ನು ಬೋಧನೆ ಮಾಡಬಾರದು. ಸಮಾಜ ವಿಜ್ಞಾನ ಇತಿಹಾಸದಲ್ಲಿ ಹತ್ತನೇ ಅಧ್ಯಾಯ 20ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದ ಐದನೇ ಅಧ್ಯಾಯ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದ 4ನೇ ಅಧ್ಯಾಯ ಸಾಮಾಜಿಕ ಸಮಸ್ಯೆಗಳು, ಅನ್ನು ಬೋಧನೆ ಪರಿಗಣಿಸದಂತೆ ತಿಳಿಸಲಾಗಿದೆ.
ಇದರಂತೆ ವಿಜ್ಞಾನ ವಿಷಯದಲ್ಲಿ ಮೂರನೇ ಅಧ್ಯಾಯ ಲೋಹಗಳು ಮತ್ತು ಅಲೋಹಗಳು, 4ನೇ ಅಧ್ಯಾಯ ಕಾರ್ಬನ್ ಮತ್ತು ಅದರ ಸಂಯುಕ್ತ ಗಳು, 8ನೇ ಅಧ್ಯಾಯ ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು, ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ, ಎಂಬ ಪಾಠಗಳನ್ನು ಕೈಬಿಡಲಾಗಿದೆ.
ಸರಕಾರ ಈ ಹಿಂದೆ ಆದೇಶಿಸಿ ದಂತೆ, ಶೇಕಡ 20ರಷ್ಟು ಪಠ್ಯಕ್ರಮ ಕಡಿತಗೊಳಿಸಿರುವ ಡಿಎಸ್ಇಆರ್ ಟಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿರುವ ಉಳಿದ ಶೇಕಡಾ 80ರಷ್ಟು ಪಠ್ಯಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ಅವಧಿಯೊಳಗೆ ಬೋಧನೆ ಮಾಡಬೇಕಿದ್ದ ಪಾಠಗಳನ್ನು ಕಡಿತ ಮಾಡಲಾಗಿದೆ.
ಕಡಿತ ಮಾಡಿರುವ ಪಠ್ಯಗಳ ಮಾಹಿತಿಯನ್ನು ಇಲಾಖೆಯ ವೆಬ್ ಸೈಟ್ ನಲ್ಲಿ ನೋಡಬಹುದು http://dsert.kar.nic.in

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...