Thursday, February 27, 2025
Thursday, February 27, 2025

ಇಂಡೋನೇಷ್ಯ ಓಪನ್ ಬ್ಯಾಡ್ಮಿಂಟನ್ : ಸಿಂಧು ಎರಡನೇ ಸುತ್ತಿಗೆ

Date:

ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೊದಲ ಗೇಮ್ನಲ್ಲಿ ಸಿಂಧು ಎದುರಾಳಿಗೆ ಹೆಚ್ಚು ಅವಕಾಶಗಳನ್ನು ಕೊಡದಂತೆ ಪಾರಮ್ಯ ಮೆರೆದರು. ಆರಂಭದಲ್ಲಿಯೇ ಸಿಂಧು ಚುರುಕಿನ ರಿಟರ್ನ್ ಮತ್ತು ನಿಖರ ಸರ್ವ್ ಗಳಲ್ಲಿ ಸತತ ಏಳು ಪಾಯಿಂಟ್ಗಳನ್ನು ಕಲೆಹಾಕಿದ ಸಿಂಧು ಮುನ್ನಡೆಯುತ್ತ ದಾಪುಗಾಲಿಟ್ಟು ಜರ್ಮನಿಯ ಆಟಗಾರ್ತಿಯನ್ನು ಮಂಕಾಗಿಸಿದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ಸಿಂಧು ಈಗಷ್ಟೇ ಇಂಡೋನೇಷಿಯಾ ಸೂಪರ್ 750 ಬ್ಯಾಡ್ಮಿಂಟನ್ ನಲ್ಲಿ ಸಿಂಧು ಸೋತಿದ್ದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಣಿಯ ಸಿಂಧು 21-12, 21-18 ರಿಂದ ಜರ್ಮನಿಯ 26ನೇ ಶ್ರೇಣಿಯ ಯವೊನೆ ಲೀ ವಿರುದ್ಧ ಜಯಿಸಿದರು. ಹಾಲಿ ವಿಶ್ವಕಪ್ ಚಾಂಪಿಯನ್ ಆಗಿರುವ ಸಿಂಧು 37 ನಿಮಿಷಗಳ ಪಂದ್ಯದಲ್ಲಿ ಮೇಲ್ಮೈ ಸಾಧಿಸಿದರು.

ಆದರೆ ಎರಡನೇ ಗೇಮ್ಸ್ ನಲ್ಲಿ ಯವೊನೆ ಲೀ ತುಸು ಪ್ರತಿರೋಧ ಒಡ್ಡಿದ್ದರು. ಆದರೆ ಜಯ ಒಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಸಿಂಧು ಜಯದತ್ತ ಮುನ್ನಡೆದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sahyadri Narayana Hospital Shimoga ಶ್ರೀಮತಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವರದಿ ಬಗ್ಗೆ ಸ್ಪಷ್ಟೀಕರಣ

Sahyadri Narayana Hospital Shimoga ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ...

Chandragutti ಸೊರಬದಿಂದ ಚಂದ್ರಗುತ್ತಿಗೆ ಭಕ್ತಾದಿಗಳಿಂದ ಶಿವರಾತ್ರಿ‌ಯ ವಿಶೇಷ ಪಾದಯಾತ್ರೆ

Chandragutti ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಐತಿಹಾಸಿಕ ಹಾಗೂ...

Eshwara Vana ಶಿವರಾತ್ರಿ ಪ್ರಯುಕ್ತ‌ “ಈಶ್ವರವನ”ದಲ್ಲಿ ರಕ್ತದಾನ ಶಿಬಿರ

Eshwara Vana ಇಂದು ಮಹಾಶಿವರಾತ್ರಿ ಅಂಗವಾಗಿ ನವ್ಯಶ್ರೀ ಈಶ್ವರ ವನ ಅಬ್ಬಲೆಗೆರೆಯಲ್ಲಿ....

S N Channabasappa ಕ್ರೀಡೆ, ಮನಸ್ಸುಗಳನ್ನ ಪರಸ್ಪರ ಹತ್ತಿರವಾಗಿಸುತ್ತದೆ- ಶಾಸಕ ಚನ್ನಬಸಪ್ಪ

S N Channabasappa ಡೆಗಳಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯಕ್ಕೆ ಆಟಗಳೇ...