Wednesday, October 2, 2024
Wednesday, October 2, 2024

ವರದಕ್ಷಿಣೆ ಹಣ, ಸಮಾಜಸೇವೆಗೆ…

Date:

ವಿವಾಹದ ಸಂದರ್ಭದಲ್ಲಿ ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ಕೊಡುವ ಅನಿಷ್ಟ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ವಧುಯೊಬ್ಬರು ತಮ್ಮ ಮದುವೆಗೆಂದು (ವರದಕ್ಷಿಣೆ) ಇರಿಸಿದ್ದ 75 ಲಕ್ಷ ರೂಗಳನ್ನು ಸಾಮಾಜಿಕ ಕಾರ್ಯಕ್ಕಾಗಿ ನೀಡಿದ್ದಾರೆ.

ರಾಜಸ್ಥಾನದ, ಬಾರ್ಮೇರ್ ಜಿಲ್ಲೆಯ ಉದ್ಯಮಿ ಕಿಶೋರ್ ಸಿಂಗ್ ಕನೋದ್ ಅವರ ಮಗಳ ಅದುವೇ ಇತ್ತೀಚೆಗೆ ನೆರವೇರಿತು. ವಧುವಿನ ಹೆಸರು ಅಂಜಲಿ ಕನ್ವಾರ್ . ತಂದೆ ಕಿಶೋರ್ ಅವರು ಮಗಳ ವಿವಾಹದ ಸಂದರ್ಭದಲ್ಲಿ, ವರನಿಗೆ ವರದಕ್ಷಿಣೆ ರೂಪದಲ್ಲಿ 75 ಲಕ್ಷವನ್ನು ರೂಪಾಯಿಗಳನ್ನು ತೆಗೆದಿರಿಸಿದ್ದರು. ಆದರೆ ಮದುಮಗಳು ಅಂಜಲಿ ಬುದ್ಧಿವಂತಿಕೆಯನ್ನು ಉಪಯೋಗಿಸಿದರು. ಮದುವೆಯ ಹಿಂದಿನ ದಿನ ಆಕೆ, ತಮ್ಮ ತಂದೆಯ ಬಳಿ ಹೋಗಿ ‘ವರದಕ್ಷಿಣೆ ನೀಡಲು ತೆಗೆದಿಟ್ಟ ಹಣವನ್ನು ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ನೀಡಿ’ ಎಂದು ಕೇಳಿಕೊಂಡರು. ಇದಕ್ಕೆ ತಂದೆ ಸಂತೋಷದಿಂದ ಒಪ್ಪಿದರು.

ಮದುವೆಯ ದಿನ ಮಂಟಪದಲ್ಲಿ ಇದರ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದರು. ಮಗಳಿಗೆ ಖಾಲಿ ಚೆಕ್ ನೀಡಿ, ಎಷ್ಟು ದೇಣಿಗೆ ನೀಡಬೇಕು. ಅದನ್ನು ಚೆಕ್ ನಲ್ಲಿ ನಮೂದಿಸಿ ಎಂದು ಹೇಳಿದರು. ಚೆಕ್ ನಲ್ಲಿ ಅಂಜಲಿಯವರು 75ಲಕ್ಷ ನಮೂದಿಸಿದರು.

ನಂತರ ಅದನ್ನು ಹಾಸ್ಟೆಲ್ ಕಟ್ಟಡ ನಿಧಿಗೆ ಅರ್ಪಿಸಲಾಯಿತು. ಹಾಸ್ಟೆಲ್ ನಿರ್ಮಿಸುತ್ತಿರುವ ತಾರಾತರ ಆಡಳಿತವರ್ಗವು ಕಿಶೋರ್ ಅವರ ದಾನ ಗುಣವನ್ನ ಮೆಚ್ಚಿದೆ.
“ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಕಿಶೋರ್ ಅವರು ಈ ಮೊದಲೇ ಒಂದು ಕೋಟಿ ದೇಣಿಗೆ ನೀಡಿದ್ದರು. ಕೆಲಸ ಪೂರ್ಣಗೊಳಿಸಲು ಇನ್ನೂ 50 ರಿಂದ 75 ಲಕ್ಷ ಹಣದ ಅಗತ್ಯವಿತ್ತು. ಈಗ ಕಿಶೋರ್ ಅವರು ಅದನ್ನು ಒದಗಿಸಿದ್ದಾರೆ” ಎಂದು ತಾರಾತರ ಮಠವು ಮಾಹಿತಿ ನೀಡಿದೆ. ಈ ವರದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಧುವಿನ ನಡೆಗೆ ಬಾರಿ ಮೆಚ್ಚುಗೆ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...