ಜಾರ್ಖಂಡಿನ ರಿಚುಗುಟಾ ಮತ್ತು ಡೆಮು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳನ್ನು ಸ್ಪೋಟ ಸಂಭವಿಸಿದೆ. ದಾಳಿ ಬೆನ್ನಲ್ಲೇ ಈ ವಿಭಾಗದ ಎಲ್ಲಾ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪಲಮು ವಲಯದ ಡಿಐಜಿ ರಾಜಕುಮಾರ್ ತಿಳಿಸಿದ್ದಾರೆ.
ಜಾರ್ಖಂಡ್ ನ ಲಾತೇಹಾರ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ ( ಮಾವೋವಾದಿ) ಸಂಘಟನೆಯ ಸದಸ್ಯರು ರೈಲು ಹಳಿಯನ್ನು ಸ್ಪೋಟಿಸಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಬಂದ ಧನ್ ಬಾಗ್ ವಿಭಾಗದ ಡೀಸೆಲ್ ರೈಲ್ವೆ ಇಂಜಿನ್ ಹಳಿ ತಪ್ಪಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಬರ್ಕಾಕಾನಾಗಡ್ವಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಈ ಮಾರ್ಗದ ಹಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಪಿಐ (ಮಾವೋವಾದಿ) ತನ್ನ ನಾಯಕ ಪ್ರಶಾಂತ್ ಬೋಸ್ ಅವರ ಬಂಧನವನ್ನು ವಿರೋಧಿಸಿ, ಶನಿವಾರ ರಾಷ್ಟ್ರವ್ಯಾಪ್ತಿ ಬಂದ್ ಗೆ ಕರೆ ನೀಡಿತ್ತು. ಬೋಸ್ ತಲೆಗೆ ಸರ್ಕಾರ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ಘೋಷಿಸಿತ್ತು. ಜಾರ್ಖಂಡ್, ಬಿಹಾರ್, ಒಡಿಶಾ, ಪಶ್ಚಿಮ ಬಂಗಾಳ, ಛತ್ತಿಸ್ ಗಢ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಭಾಗದಲ್ಲಿ ನಡೆದಿರುವ ನೂರಕ್ಕೂ ಹೆಚ್ಚು ದಾಳಿಗಳ ಪ್ರಧಾನ ಸಂಚುಕೋರ ಬೋಸ್ ಎಂದು ಮೂಲಗಳು ತಿಳಿಸಿವೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.