ಬೆಂಗಳೂರಿನಲ್ಲಿ ತಂತ್ರಜ್ಞಾನ ಶೃಂಗ ಸಭೆಯ ಎರಡನೇ ದಿನ ‘ಬೆಂಗಳೂರು ನೆಕ್ಟ್ಸ್’ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯದಲ್ಲಿ ನವೋದ್ಯಮ ಹೆಚ್ಚಲು ಮತ್ತು ಇರುವ ಉದ್ಯಮಗಳು ಅಭಿವೃದ್ಧಿ ಕಾಣಲು ಇಲ್ಲಿನ ಸಂಸ್ಕೃತಿ ಕಾರಣ ಎಂದು ರಾಜ್ಯ ಸ್ಮಾರ್ಟ್ ಅಪ್ ಗ್ರೂಪ್ ನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈಗ ಶತಕೋಟಿ ಡಾಲರ್ ವಹಿವಾಟಿನ ಯೂನಿಕಾರ್ನ್ ಕಂಪನಿಗಳು ಸದ್ದು ಮಾಡುತ್ತಿವೆ. ಇನ್ನು ಒಂದೆರಡು ವರ್ಷಗ ಳಲ್ಲಿ 10 ಕೋಟಿ ಡಾಲರ್ ವಹಿವಾಟು ನಡೆಸುವ ಡೆಕಾಕಾರ್ನ್ ಕಂಪನಿಗಳು ರಾರಾಜಿಸಲಿವೆ ಎಂದರು. ಇದರ ಶ್ರೇಯಸ್ಸು ಶೇ. 90ರಷ್ಟು ನಮ್ಮ ರಾಜ್ಯದ ಸಂಸ್ಕೃತಿಗೆ ಸಲ್ಲಬೇಕು. ಇಲ್ಲಿ ಯಾವ ಪಕ್ಷದ ಸರ್ಕಾರ ಬಂದರು ಉದ್ಯಮ ಸ್ನೇಹಿಯಾಗಿರುತ್ತದೆ. ವಿಷನ್ ಗ್ರೂಪ್ ಗಳನ್ನು ಸ್ಥಾಪಿಸುವುದವರಲ್ಲಿ ನಮ್ಮವರೇ ಮೊದಲಿಗರು ಎಂದು ರಾಜ್ಯ ಸ್ಮಾರ್ಟ ವಿಷನ್ ಗ್ರೂಪ್ ನ ಮುಖ್ಯಸ್ಥ ತಿಳಿಸಿದರು.
‘ಇಂಥ ಸ್ಟಾರ್ಟಪ್ ಸ್ನೇಹಿ ವಾತಾವರಣ ಇರುವುದರಿಂದಲೇ ದೆಹಲಿ ಮತ್ತು ಜೈಪುರ ಗಳಿಂದ ಕಂಪನಿಗಳು ನಂತರ ಗೊಂಡವು’ ಎಂದು ಸುಜಿತ್ ಕುಮಾರ್ ಹರ್ಷಿಲ್ ಮಾಥೂರ್ ಹೇಳಿದರು.
ಕಿಂಡ್ರೆಲ್ ಕಂಪನಿಯ ಲಿಂಗರಾಜ ಸಾಹುಕಾರ್ ಅವರು ತಮ್ಮ ಸ್ಟಾರ್ಟಪ್ ನಲ್ಲಿ 19000 ಉದ್ಯೋಗಿಗಳು ಇರುವುದನ್ನು ತಿಳಿಸಿದರು.