Wednesday, October 2, 2024
Wednesday, October 2, 2024

ಸಂತೋಷ, ಸಡಗರ ಕಳೆದುಕೊಂಡ ಹಗಲುವೇಷ

Date:

ನಮ್ಮ ಜನಪದ ಹಲವು ಕಲೆಗಳ ಅದಮ್ಯ ಉಗ್ರಾಣ ಅವುಗಳು ಹಾಡಿನ ರೂಪ, ಕುಣಿತದ ರೂಪ, ವೇಷದ ರೂಪಗಳಾಗಿ ಹೊರಹೊಮ್ಮಿವೆ. ಅಷ್ಟೇ ಅಲ್ಲ ನಮ್ಮ ಗ್ರಾಮೀಣ ಸಂಸ್ಕೃತಿಯ ಸಂಕೇತಗಳು ಆಗಿವೆ. ಹಲವು ಕಲೆಗಳು ಕೆಲವು ಜನಾಂಗಗಳಲ್ಲಿವೆ, ಕೆಲವು ಕಲೆಗಳು ಹಲವು ಜನಾಂಗದಲ್ಲಿವೆ. ಇಂತಹ ಪ್ರದರ್ಶಕ ಕಲೆಗಳಲ್ಲಿ ಹಗಲುವೇಷವು ಒಂದು. ಅಲೆಮಾರಿ ಜನಾಂಗಗಳಲ್ಲಿ ಹೆಚ್ಚಾಗಿ ಈ ಕಲೆ ಮನೆಮಾಡಿದೆ. ಹೊನ್ನಾಳಿ ಯವರಾದ ಶ್ರೀ ಈಶ್ವರಪ್ಪ ಅವರ ಪತ್ನಿ ಶ್ರೀಮತಿ ಮಂಜಳ ಹಾಗೂ ಅವರ ಬಂಧು ಲಕ್ಷ್ಮಣ್ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ನಮ್ಮ Klive ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ನೋವು-ನಲಿವು ಹಂಚಿಕೊಂಡರು. ಹಗಲುವೇಷ ಕಲೆಯು ಅವರ ಹಬ್ಬದ ಆಚರಣೆಯ ಒಂದು ಭಾಗ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಗಲು ವೇಷ ಧರಿಸಿ ಊರು-ಊರು ಅಲೆಯುತ್ತಾರೆ. ಇಂತಹ ಕಲಾವಿದರನ್ನು ಬೀದಿಯಲ್ಲಿ ಕಂಡ ಕಲಾರಸಿಕರು ತಮ್ಮ ಕೈಲಾದ ಕಾಣಿಕೆ ನೀಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಹಗಲುವೇಷ ಇಲ್ಲದ ಸಂದರ್ಭದಲ್ಲಿ ಕೂಲಿ, ಕೃಷಿ, ವ್ಯಾಪಾರ ಮುಂತಾದ ವೃತ್ತಿಗಳಲ್ಲಿ ಜೀವನೋಪಾಯ ಕಂಡುಕೊಳ್ಳುತ್ತಾರೆ. ನಶಿಸಿಹೋಗುವ ಆತಂಕದಲ್ಲಿದೆ ಈ ಕಲಾಪ್ರಕಾರ.ಉಳಿಸಬೇಕೆ? ಬೆಳೆಸಬೇಕೆ? ಜನಪದ ವಿದ್ವಾಂಸರು ಈ ಬಗ್ಗೆ ಚರ್ಚಿಸಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....