ನಮ್ಮ ಜನಪದ ಹಲವು ಕಲೆಗಳ ಅದಮ್ಯ ಉಗ್ರಾಣ ಅವುಗಳು ಹಾಡಿನ ರೂಪ, ಕುಣಿತದ ರೂಪ, ವೇಷದ ರೂಪಗಳಾಗಿ ಹೊರಹೊಮ್ಮಿವೆ. ಅಷ್ಟೇ ಅಲ್ಲ ನಮ್ಮ ಗ್ರಾಮೀಣ ಸಂಸ್ಕೃತಿಯ ಸಂಕೇತಗಳು ಆಗಿವೆ. ಹಲವು ಕಲೆಗಳು ಕೆಲವು ಜನಾಂಗಗಳಲ್ಲಿವೆ, ಕೆಲವು ಕಲೆಗಳು ಹಲವು ಜನಾಂಗದಲ್ಲಿವೆ. ಇಂತಹ ಪ್ರದರ್ಶಕ ಕಲೆಗಳಲ್ಲಿ ಹಗಲುವೇಷವು ಒಂದು. ಅಲೆಮಾರಿ ಜನಾಂಗಗಳಲ್ಲಿ ಹೆಚ್ಚಾಗಿ ಈ ಕಲೆ ಮನೆಮಾಡಿದೆ. ಹೊನ್ನಾಳಿ ಯವರಾದ ಶ್ರೀ ಈಶ್ವರಪ್ಪ ಅವರ ಪತ್ನಿ ಶ್ರೀಮತಿ ಮಂಜಳ ಹಾಗೂ ಅವರ ಬಂಧು ಲಕ್ಷ್ಮಣ್ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರು ನಮ್ಮ Klive ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ನೋವು-ನಲಿವು ಹಂಚಿಕೊಂಡರು. ಹಗಲುವೇಷ ಕಲೆಯು ಅವರ ಹಬ್ಬದ ಆಚರಣೆಯ ಒಂದು ಭಾಗ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಹಗಲು ವೇಷ ಧರಿಸಿ ಊರು-ಊರು ಅಲೆಯುತ್ತಾರೆ. ಇಂತಹ ಕಲಾವಿದರನ್ನು ಬೀದಿಯಲ್ಲಿ ಕಂಡ ಕಲಾರಸಿಕರು ತಮ್ಮ ಕೈಲಾದ ಕಾಣಿಕೆ ನೀಡಿ ಅಭಿಮಾನ ವ್ಯಕ್ತಪಡಿಸುತ್ತಾರೆ. ಹಗಲುವೇಷ ಇಲ್ಲದ ಸಂದರ್ಭದಲ್ಲಿ ಕೂಲಿ, ಕೃಷಿ, ವ್ಯಾಪಾರ ಮುಂತಾದ ವೃತ್ತಿಗಳಲ್ಲಿ ಜೀವನೋಪಾಯ ಕಂಡುಕೊಳ್ಳುತ್ತಾರೆ. ನಶಿಸಿಹೋಗುವ ಆತಂಕದಲ್ಲಿದೆ ಈ ಕಲಾಪ್ರಕಾರ.ಉಳಿಸಬೇಕೆ? ಬೆಳೆಸಬೇಕೆ? ಜನಪದ ವಿದ್ವಾಂಸರು ಈ ಬಗ್ಗೆ ಚರ್ಚಿಸಬೇಕಿದೆ.
ಸಂತೋಷ, ಸಡಗರ ಕಳೆದುಕೊಂಡ ಹಗಲುವೇಷ
Date: