Wednesday, October 2, 2024
Wednesday, October 2, 2024

ಕನ್ನಡಿಗರ ಮುಡಿಗೆ ಪದ್ಮ ಪುರಸ್ಕಾರ

Date:

ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಅನೇಕ ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಯಿತು.

ಶ್ರೀ ವಿಶ್ವೇಶತೀರ್ಥ ಶ್ರೀ ಪಾದರಿಗೆ ನೀಡಲಾದ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಯನ್ನು , ಹಾಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾನ್ಯ ರಾಷ್ಟ್ರಪತಿಗಳಿಂದ
ಪ್ರಶಸ್ತಿ ಸ್ವೀಕರಿಸಿದರು.
ಧಾರ್ಮಿಕ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಅವರ ಅನೇಕ ಸಮಾಜಪರ ಕಾಳಜಿಗಳು ಉಳಿದ ಮಠಾಧೀಶರಿಗೆ ಮಾದರಿ ಎನಿಸಿವೆ. ಸನಾತನ ಹಿಂದೂ ಧರ್ಮ ರಕ್ಷಣೆಯಲ್ಲಿ ಸರಳ ನೀತಿಯನ್ನು ಪ್ರತಿಪಾದಿಸಿದ ಶ್ರೀಗಳು, ತಮ್ಮದೇ ಆದ ವಿಚಾರಗಳಿಂದ ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಜೀವಿತ ಕಾಲದಲ್ಲಿಯೇ ಹುಡುಕಿಕೊಂಡು ಬರಬೇಕಾಗಿದ್ದ, ದೇಶಸಮ್ಮಾನ ಅವರಿಗೆ ಮರಣೋತ್ತರ ಸಂದಿದೆ.

ಕಿತ್ತಲೆ ಮಾರಿ ಶಾಲೆ ಕಟ್ಟಿದ ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬ, ಕಾಡಿನ ವೃಕ್ಷ ದೇವತೆ ಎಂದೇ ಹೆಸರುವಾಸಿಯಾದ ಅಂಕೋಲದ ತುಳಸಿ ಗೌಡ, ಕರ್ನಾಟಕದ ನೆಲದಲ್ಲಿ ಸರಕು ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ ಶ್ರೀ.ವಿಜಯ ಸಂಕೇಶ್ವರ ಮತ್ತು ಭಾರತೀಯ ಹಾಕಿ ತಂಡದ ನಾಯಕರಾಗಿ ಘನತೆಯನ್ನು ಎತ್ತರಕ್ಕೆರಿಸಿದ ಕೊಡಗಿನ ಯೋಧ ಎಂ. ಪಿ. ಗಣೇಶ್ ಹಾಗೂ ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ದಿ. ಸಂಪತ್ ಕುಮಾರ್, ಜಯಲಕ್ಷ್ಮಿ ಇವರುಗಳಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಹಾಜಬ್ಬ ಅವರನ್ನು ಪ್ರಧಾನಿ ಅವರು ಕಂಡ ಕೂಡಲೇ ಅವರನ್ನು ಅಕ್ಕಕ್ಕದವರಿಗೆ ಪರಿಚಯಿಸಿದ ಪ್ರಸಂಗವನ್ನು ನೆನೆದು ಹಾಜಬ್ಬ ರೋಮಾಂಚನಗೊಂಡರು. ಹಾಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹತ್ತಿರ ಹೋಗಿ ಊರಿಗೆ ಕಾಲೇಜು ಕಟ್ಟಲು ಒಂದು ಕೋಟಿ ರೂಪಾಯಿ ನೀಡಬೇಕೆಂದು ಕೋರಿದರು.

ಲಕ್ಷಾಂತರ ಗಿಡಗಳನ್ನು ಬೆಳೆಸಿ, ಗಿಡ-ಮರಗಳ ಮಾಹಿತಿ ಕಣಜ ಎಂದೇ ಪ್ರಸಿದ್ದಿ ಯಾಗಿದ್ದಾರೆ ಶ್ರೀಮತಿ ತುಳಸಿ ಗೌಡ. ಈ ಹಿಂದೆ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ವೃಕ್ಷ ದೇವತೆ ಎಂದೇ ಪ್ರಸಿದ್ದಿಯಾಗಿದ್ದಾರೆ. ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಸರಕು,ಸಾರಿಗೆ ಸಾಮ್ರಾಜ್ಯವನ್ನು ನಿರ್ಮಿಸಿದ,ಉದ್ಯಮಿ ವಿಜಯ ಸಂಕೇಶ್ವರ್ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರು ಸ್ಥಾಪಿಸಿರುವ, ವಿಆರ್ಎಲ್ ಸಂಸ್ಥೆಯು ದೇಶದ ಅತಿ ದೊಡ್ಡ ಸಾರಿಗೆ ಉದ್ಯಮ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪತ್ರಿಕಾ ಲೋಕರಂಗ ಹಾಗೂ ಖಾಸಗಿ ಟಿವಿ ಚಾನಲ್ ಮಾಲೀಕರಾಗಿ ಮಾಲೀಕರಾಗಿ ಯಶಸ್ವಿಯಾಗಿದ್ದಾರೆ. ಅದು ಅವರು ಸಂಸದ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಾಕಿ ಕ್ರೀಡಾ ಕ್ಷೇತ್ರದಲ್ಲಿ ಸಾಧಕ ಎಂಪಿ ಗಣೇಶ್ ಭಾರತಕ್ಕೆ ಒಲಿಂಪಿಕ್ ಪದಕ ತಂದವರು. ಪದ್ಮಶ್ರೀ ಪ್ರಶಸ್ತಿ ನನಗೆ ಸಂತಸವನ್ನುಂಟು ಮಾಡಿದೆ. ಪ್ರಶಸ್ತಿ ಎಲ್ಲಾ ಹಾಕಿ ವಿದ್ಯಾರ್ಥಿಗಳಿಗೆ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕೊಡವ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಸುಧರ್ಮ ಎಂಬ ಸಂಸ್ಕೃತಭಾಷೆಯ ಪತ್ರಿಕೆಯನ್ನು ನಡೆಸಿಕೊಂಡು ಬಂದವರು ಮೈಸೂರಿನ ದಿ. ಸಂಪತ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಜಯಲಕ್ಷ್ಮಿ ಅವರಿಗೆ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಸಂಪತ್ ಕುಮಾರ್ ಇಹಲೋಕ ತ್ಯಜಿಸಿರುವುದರಿಂದ ಜಯಲಕ್ಷ್ಮಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...