Tuesday, November 18, 2025
Tuesday, November 18, 2025

ಟಿ -20 “ಕಿವಿ” ಹಿಂಡಿಸಿಕೊಂಡ ಭಾರತ

Date:

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B – ಗುಂಪಿನಲ್ಲಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಿತು. ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಜಯ ಗಳಿಸಿತು.
ದುಬೈನ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 110 ರನ್ ಗಳಿಸಿತು. ಆರಂಭದಲ್ಲಿಯೇ ಆಘಾತಗೊಂಡ ಭಾರತ ತಂಡ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲ್ಲಿಲ್ಲ.
ದಿಡೀರ್ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡವನ್ನು ಕಂಡ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅಂಕಣ ಇಳಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ 23 ರನ್ ಗಳನ್ನ ಕಲೆ ಹಾಕಿದರು. ಹಾಗೆಯೇ ರವೀಂದ್ರ ಜಡೇಜಾ 19 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸ್ ಸಿಡಿಸಿ, ಇವರಿಬ್ಬರ ಜೊತೆಯಾಟದಲ್ಲಿ ಕೆಲ ಕಾಲ ಪ್ರತಿ ಹೋರಾಟದಿಂದ ಹೆಚ್ಚು ರನ್ ಗಳಿಸಬಹುದು ಎಂಬ ಆಸೆ ಹೂಡಿತು.
ಅಂತೆ ಪಾಂಡೆ ಹಾಗೂ ಜಡೇಜಾ ಜೋಡಿ 6 ನೇ ವಿಕೆಟ್ ಗೆ 24 ರನ್ ಸೇರಿಸಿದರು. ಬೌಲ್ಟ್ ರವರ ಎಸೆತದಲ್ಲಿ ಗುಪ್ಟಿಲ್ ಸುಲಭವಾಗಿ ಕ್ಯಾಚ್ ಸಿಕ್ಕಿಸಿ ಹೊರ ನಡೆದರು.
ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ ಕಡೆಯ ಓವರ್ ನಲ್ಲಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿ ರನ್ ರೇಟ್ ಹೆಚ್ಚಳಕ್ಕೆ ಪ್ರಮುಖ ಕಾರಣರಾದರು.
110 ರನ್ ಗಳನ್ನ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ ಕೇವಲ 14.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಭಾರಿಸಿ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡ ವೇಗಿ ಟ್ರಂಪ್ ಬೌಲ್ಟ್ 20 ರನ್ ಗಳಿಗೆ 2 ವಿಕೆಟ್ ತೆಗೆದುಕೊಂಡರು. ಹಾಗೆಯೇ ಸ್ಪಿನ್ನರ್ ಇಶ್ ಸೋಧಿ 17 ರನ್ ಗಳಿಗೆ 2 ವಿಕೆಟ್ ತೆಗೆದುಕೊಂಡರು. ಇವರ ರೋಚಕ ಬೌಲಿಂಗ್ ನಿಂದ ವಿರಾಟ್ ಕೊಹ್ಲಿ ಬಳಗವು ನಲುಗಿ ಸತತ ಎರಡನೇ ಸೋಲನ್ನು ಕಂಡಿತು.
ನ್ಯೂಜಿಲೆಂಡ್ ತಂಡದ ಆಟಗಾರರ ಬೌಲಿಂಗ್ ಹಾಗೂ ಬ್ಯಾಟಿಂಗ್ ಇವೆರೆಡರ ಉತ್ತಮ ಪ್ರದರ್ಶನ ತೋರಿದ ಆಟಗಾರರು ಭಾರತ ತಂಡವನ್ನು ಬಹಳ ಸುಲಭವಾಗಿ ಸೋಲಿಸಿ ತಂಡದ ಗೆಲುವಿಗೆ ಕಾರಣರಾದರು .
ಕೀವಿಸ್ ತಂಡದ ನಿಕಟ ಬೌಲಿಂಗ್ ನ ಎದುರು ಭಾರತ ಬ್ಯಾಟ್ಸ್ ಮನ್ ಗಳ ಯಾವ ಆಟವು ನಡೆಯಲಿಲ್ಲ ಹಾಗಾಗಿ ಭಾರತಕ್ಕೆ ಸೆಮಿಫೈನಲ್ ನ ದಾರಿ ಬಹಳ ಕಠಿಣವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ

Kuvempu University ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ನ.18ರಂದು...

Agricultural University ರೈತರಿಗೆ ಕೃಷಿಯಿಂದ ಆದಾಯ ಹೆಚ್ಚಬೇಕು.ಕೃಷಿಯಲ್ಲಿ ಆಂದೋಲನವಾಗಬೇಕು- ಸಚಿವ ಎನ್.ಚಲುವರಾಯ ಸ್ವಾಮಿ

Agricultural University ಸರ್ಕಾರದ ವಿವಿಧ ಕಾರ್ಯಕ್ರಮಗಳು, ಯೋಜನೆಗಳು, ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆ,ಹೊಸ...

ಮಾಹಿತಿ ಹಕ್ಕು ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಿ- ಆಯುಕ್ತ ರುದ್ರಣ್ಣ ಹರ್ತಿಕೋಟೆ

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ...