ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಗಾಂಧಿ ಕಥನ’ ಕೃತಿಯ ಲೇಖಕ ಡಿ.ಎಸ್. ನಾಗಭೂಷಣ ಅವರಿಗೆ ಅಭಿನಂದನೆ ಮತ್ತು ಅವರ “ವಿಧ ವಿಧ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸ್ನೇಹ ಬಳಗವು ಪತ್ರಿಕಾ ಭವನದಲ್ಲಿ ಆಯೋಜಿಸಿತ್ತು.
“ಕೊಡಗಿನ ಜಲಪ್ರಳಯವನ್ನು ವೈಜ್ಞಾನಿಕವಾಗಿ ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ ಆದರೆ ಪ್ರಕೃತಿಯನ್ನು ಆಧಾರವಾಗಿಟ್ಟುಕೊಂಡು ಏನು ಮನಗಂಡರೆ ಅದರ ಅರ್ಥ ತಿಳಿಯಬಹುದು. ಪುಸ್ತಕದಲ್ಲಿ ಅರ್ಥಪೂರ್ಣವಾಗಿ ತಿಳಿಸಲಾಗಿದೆ” ಎಂದು ಸಾಹಿತಿ ಡಾ. ರಾಜೇಂದ್ರ ಚೆನ್ನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
“ಗಾಂಧೀಜಿಯವರು ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ ಅವರು ಅಧ್ಯಯನದ ವಿಷಯವಾಗಿದ್ದಾರೆ. ವಿಶ್ವದ ಹಲವೆಡೆ ಅವರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಗಾಂಧಿ ಕಥನದಲ್ಲಿ ಡಿ.ಎಸ್.ನಾಗಭೂಷಣ್ ಇರುವುದನ್ನು ಇರುವಂತೆ ನೇರವಾಗಿ ಹೇಳಿದ್ದಾರೆ. ಗಾಂಧೀಜಿಯವರನ್ನು ಸಾಮಾಜಿಕ ರಾಜಕೀಯವಾಗಿ ಬೇರೆಯ ರೀತಿಯಲ್ಲಿ ಅರ್ಥೈಸಲು ಅವರ ವಿಚಾರಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸ ಕೃತಿಯಲ್ಲಿ ಮಾಡಲಾಗಿದೆ” ಎಂದು ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಅವರು ತಿಳಿಸಿದರು.
ಡಿ.ಎಸ್.ನಾಗಭೂಷಣ ಅವರು ಮಾತನಾಡಿ “ಗಾಂಧೀಜಿ ಅವರು ಮೊಟ್ಟಮೊದಲು ತನ್ನ ಮನಸ್ಸಿಗೆ ಅಚ್ಚೊತ್ತಿ ನಿಂತ ಘಟನೆ ಹಸಿರಾಗಿದೆ.ಎಳೆತನದಲ್ಲಿ ತಂದೆಯವರು ನ್ಯಾಮಗೊಂಡ್ಲಿಗೆ ವರ್ಗವಾದರು.ಅಲ್ಲಿ ಬಸ್ ನಿಲ್ದಾಣದಲ್ಲಿ ಶ್ರೀಕಂಠ ಶೆಟ್ಟರು ಗಾಂಧೀ ಪೋಟೋ ಇಟ್ಟುಕೊಂಡು ಉಪವಾಸ ಕೂತಿದ್ದನ್ನ ನೋಡಿದೆ. ಆ ಘಟನೆ ನನಗನ ಮನದೊಳಗೇ ಗಾಂಧೀಜಿಯ ಚಿಂತನೆಗಳನ್ನ ಸ್ಫುರಿಸಲು ಕಾರಣವಾಗಿರಬಹುದು. ಅಲ್ಲಿಂದ ನನ್ನೊಳಗೇ ಗಾಂಧಿ ಮನದ ಮೂಲೆಯಲ್ಲಿದ್ದರು.
ಸರ್ಕಾರಿ ನೌಕರಿ ಸೇರಿದ ನಂತರ ಲೋಹಿಯ,ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಓದುತ್ತಾ ಬಂದೆ” ಎಂದು ಹೇಳಿದರು.
“ಹೀಗೆ ಒಂದಲ್ಲ ಒಂದು ಘಟನೆಗಳು ,ಪುಸ್ತಕದ ಓದು,ವಿಚಾರವಂತರೊಂದಿಗಿನ ವೈಚಾರಿಕ ಚರ್ಚೆ ನನ್ನೊಳಗೆ ಗಾಂಧಿಯನ್ನ ಬೆಲಕೆಸುತ್ತಾ ಬಂದವು.
ಮುಖ್ಯವಾಗಿ ವಿದ್ವಾಂಸ ರಾಮಚಂದ್ರ ಗುಹ ಅವರೊಂದಿಗಿನ ವೈಚಾರಿಕ ಸಂಘರ್ಷ ಗಾಂಧಿಯವರ ಚಿಂತನೆಗಳನ್ನ ಅಧ್ಯಯನ ಮಾಡಲು ಬಲವಾದ ಪ್ರೇರೇಪಣೆ ನೀಡಿತೆನ್ನಬಹುದು.
ಅವರು ನೀಡಿದ ಗಾಂಧೀಜಿ ಬಿಫೋರ್ ಇಂಡಿಯ ಕೃತಿ ನನ್ನಲ್ಲಿ ಇದೂವರೆಗೂ ನಾನು ಕಂಡಿರದ ಗಾಂಧಿಯ ಅಸ್ತಿತ್ವ,ಹಿನ್ನೆಲೆಗಳನ್ನ
ನೀಡಿತು.
ನಿಜಕ್ಕೂ ಗಾಂಧಿ ಇವರೇನ? ಎಂದು ವಿಸ್ಯಯಗೊಂಡೆ.

ಬಹುಷಃ ಆ ಗಾಂಧಿಯನ್ನ ಅಂಬೇಡ್ಕರ್ ಕಂಡುಕೊಂಡಿದ್ದರೆ ಅವರೀರ್ವರಲ್ಲಿ ಅಭಿಪ್ರಾಯ ಭೇದಗಳು ಇರುತ್ತಿಲಿರಲ್ಲ. ದಕ್ಷಣ ಆಫ್ರಿಕಾದಿಂದ ಬಂದ ಗಾಂಧೀಜಿಯವರಲ್ಲಿ ಒಬ್ಬ ಅಪ್ಪಟ ಸುಧಾರಕ, ಬದಲಾವಣೆಯ ಹರಿಕಾರ ರೂಪಗೊಂಡಿದ್ದ.
ಅದೇ ನಮಗೆ ಲಾಭವಾಗಿದ್ದು.
ಅಂತಹ ಗಾಂಧೀ ಚಿಂತನೆಗಳನ್ನ ಕಾಂಗ್ರೆಸ್ ಬರುಬರುತ್ತಾ ಮೂಲೆಗುಂಪು ಮಾಡಿ ಹಾಳಾಯಿತು. ಅವರ ಬುದ್ಧಿಗೇಡಿತನದ ಅವಕಾಶಗಳನ್ನ ಬಳಸಿ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಿವೆ.
ಇದೊಂದು ದುರಂತ.
ಗಾಂಧಿ ತತ್ವಗಳು ಎಲ್ಲರಿಗೂ ನಿಲುಕುವಂತಿವೆ.ಆದರೆ ಅರ್ಥೈಸುವಲ್ಲಿ ಎಡವಿದರೆ ಗಾಂಧಿ ಅಪಾರ್ಥವಾಗುತ್ತಾರೆ.
ಅಂಬೇಡ್ಕರ್ ಅವರು ಗಾಂಧೀಜಿಯವರನ್ನ ತಿಳಿದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಡಿ.ಎಸ್.ನಾಗಭೂಷಣ್ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ನೇಹ ಬಳಗವು ಡಿ.ಎಸ್.ನಾಗಭೂಷಣ್ ಮತ್ತು ಅವರ ಪತ್ನಿ ಶ್ರೀಮತಿ ಸವಿತಾ ಅವರನ್ನೂ ಸನ್ಮಾನಿಸಿತು.
ಈ ಕಾರ್ಯಕ್ರಮದಲ್ಲಿ ಪ್ರೊ. ಸತ್ಯನಾರಾಯಣರಾವ್ ಅಣತಿ, ಚಂದ್ರಶೇಖರಯ್ಯ, ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Latest News on WhatsApp

Why Keelambi Media Lab Pvt Ltd ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App

KLIVE Android App on Google Play Store

Download the most loved Klive App for your Android phone or tablet