ದಿನಾಂಕ 10.06.2026 ರಂದು ಮಧ್ಯರಾತ್ರಿ ಗಡಿಕ್ಕಲ್ ಸರ್ಕಲ್ ನಲ್ಲಿ ದನ ಕಳ್ಳತನಕ್ಕೆ ಪ್ರಯತ್ನ ಪಟ್ಟ ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ರೋಷನ್ ಬೇಗ್ ಬಿನ್ ಪೈರೋಜ್ ಬೇಗ್ 31 ವರ್ಷ ಹಾಗೂ ಟೌನ್ ಇಮ್ರಾನ್ ಬಿನ್ ಅತೀಕ್ ಅಹಮದ್ 39 ವರ್ಷ ಇಬ್ಬರು ಆರೋಪಿಗಳು ಹಾಗೂ 4 ಲಕ್ಷ ಮೌಲ್ಯದ ಎರ್ಟಿಗಾ ಕಾರ್ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣ ಭೇದಿಸುವಲ್ಲಿ ಡಿ ವೈ ಎಸ್ ಪಿ ತೀರ್ಥಹಳ್ಳಿ ರವರಾದ ಅರವಿಂದ್ ಕಲಗುಜ್ಜಿ ರವರು ಹಾಗೂ ತೀರ್ಥಹಳ್ಳಿ ಠಾಣೆ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್ ಪಿಎಸ್ಐ ಸುಷ್ಮಾ ಆರ್. ಪಿಎಸ್ಐ ಯುವರಾಜ್ ರವರೊಂದಿಗೆ ಸಿಬ್ಬಂದಿಗಳಾದ ಲಿಂಗೇಗೌಡ, ಕುಮಾರ, ಪ್ರಸನ್ನ. ದೀಪಕ್. ಪ್ರದೀಪ ಕೆ. ಪಿ. ಮಂಜುನಾಥ್ ಹಂಪಿಹೊಳಿ. ಪ್ರಮೋದ್ ಜೆ. ರವರು ಇದ್ದರು.
ತೀರ್ಥಹಳ್ಳಿ ಗಡಿಕ್ಕಲ್ ಸರ್ಕಲ್ ಬಳಿ ದನಗಳ್ಳತನಕ್ಕೆ ಪ್ರಯತ್ನ, ಆರೋಪಿಗಳ ಸೆರೆ
Date:
