S. N. Chennabasappa ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬುತ್ತಿರುವ ಈ ಐತಿಹಾಸಿಕ ಸುಸಂದರ್ಭದಲ್ಲಿ, ಬಂಗಾಳದ ಪುಣ್ಯ ಭೂಮಿಯಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿರುವ ಅಭೂತಪೂರ್ವ ಗೆಲುವು ನಮ್ಮೆಲ್ಲರನ್ನು ರಾಷ್ಟ್ರ ಮತ್ತು ಧರ್ಮದ ಸೇವೆಗೆ ಮತ್ತಷ್ಟು ಬದ್ಧತೆಯಿಂದ ದುಡಿಯಲು ಪ್ರೇರೇಪಿಸಿದೆ. ಪಶ್ಚಿಮ ಬಂಗಾಳದ ಈ ಜಯವು ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ; ಇದು ಕಾರ್ಯಕರ್ತರ ನಿರಂತರ ಪರಿಶ್ರಮ, ಸಂಘಟಿತ ನಾಯಕತ್ವ ಹಾಗೂ ಸಿದ್ಧಾಂತಾಧಾರಿತ ರಾಜಕೀಯಕ್ಕೆ ಸಂದ ಸ್ಪಷ್ಟ ಫಲವಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವಕ್ಕೆ ಸಾಕ್ಷಿಯಾಗಿರುವ ಈ ವಿಜಯವು, ತಾಯಿ ಭಾರತಿಯ ಪಾದಪದ್ಮಗಳನ್ನು ಪೂಜಿಸಲು ಬಂಗಾಳದ ಜನತೆ ನೀಡಿರುವ ಶ್ರೇಷ್ಠ ಉಡುಗೊರೆಯಾಗಿದೆ ಎಂದು ಶಾಸಕರಾದ ಎಸ್. ಎನ್. ಚೆನ್ನಬಸಪ್ಪನವರು ಹೇಳಿದ್ದಾರೆ.
ಗಡಿ ಭಾಗಗಳಲ್ಲಿ ನುಸುಳುಕೋರರ ಭೀತಿಯಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಗೆಲುವು ಅತ್ಯಂತ ಅನಿವಾರ್ಯವಾಗಿತ್ತು. ದೇಶದ ಭದ್ರತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಈ ಫಲಿತಾಂಶವು ಮೈಲಿಗಲ್ಲಾಗಿದ್ದು, ಇದು ಮೂಲಭೂತವಾಗಿ ಅಧರ್ಮದ ವಿರುದ್ಧದ ಹಿಂದೂ ಧರ್ಮದ ಗೆಲುವಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಂಕಿಮಚಂದ್ರ ಚಟ್ಟೋಪಾಧ್ಯಾಯ ಹಾಗೂ ರವೀಂದ್ರನಾಥ ಟಾಗೋರರಂತಹ ಮಹನೀಯರು ನಡೆದಾಡಿದ ನೆಲದಲ್ಲಿ ರಾಷ್ಟ್ರಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತರಲು ಯತ್ನಿಸಿದ ಶಕ್ತಿಗಳಿಗೆ ಅಲ್ಲಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಈ ಗೆಲುವು ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಸಮೀಕರಣಗಳನ್ನು ರೂಪಿಸುತ್ತಿರುವುದಲ್ಲದೆ, ಸನಾತನ ಸಂಸ್ಕೃತಿಯ ಅಭಿವ್ಯಕ್ತಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದರು.
S. N. Chennabasappa ವಂದೇ ಮಾತರಂ ಎಂಬುದು ಕೇವಲ ಒಂದು ಐತಿಹಾಸಿಕ ಘೋಷವಾಕ್ಯವಲ್ಲ; ಅದು ಇಂದಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿಯೂ ಮಹತ್ವದ ಸಾರ್ಥಕತೆ ಹೊಂದಿರುವ ಒಂದು ಜೀವಂತ ಸಂಕೇತವಾಗಿದೆ. ರಾಷ್ಟ್ರದ ಸಮಗ್ರತೆ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ನಮ್ಮ ಹೋರಾಟವು ಎಂದಿನಂತೆ ನಿರಂತರವಾಗಿರಲಿದ್ದು, ದೇಶದ ಅಸ್ಮಿತೆಯನ್ನು ಕಾಪಾಡುವ ದೃಢ ಸಂಕಲ್ಪದೊಂದಿಗೆ ನಾವೆಲ್ಲರೂ ಮುನ್ನಡೆಯೋಣ. ರಾಷ್ಟ್ರದ ಸಮಗ್ರತೆ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದಿದ್ದಾರೆ.
