Bapuji Institute of Management and Research ಭೌತಿಕ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನಗಳಿಗೂ ಸವಾಲಾಗಬಲ್ಲದು ಬೌದ್ಧಿಕ ಸಾಮರ್ಥ್ಯ ಮಾತ್ರ, ಭವಿಷ್ಯದಲ್ಲಿ ಇದಕ್ಕೇ ಬೆಲೆ ಎಂದು ಖ್ಯಾತ ಲೆಕ್ಕ ಪರಿಶೋಧಕ ಡಾ ಅಥಣಿ ಎಸ್ ವೀರಣ್ಣ ಅಭಿಪ್ರಾಯ ಪಟ್ಟರು.
ಅವರಿಂದು ಬಾಪೂಜಿ ವಿದ್ಯಾ ಸಂಸ್ಥೆಯ ಲೇಕ್ ವ್ಯೂ ನ ಬಾಪೂಜಿ ಆಫ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ನಲ್ಲಿ ಏರ್ಪಾಡಾಗಿದ್ದ ರಾಜ್ಯಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳ ಸ್ಪರ್ಧೋತ್ಸವ ‘ಆಕ್ಟಾಗನ್ ಸ್ಪೆಕ್ಟ್ರಾ’ವನ್ನು ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕೇ ಹೊರತು ಅದಕ್ಕೆ ಶರಣಾಗಬಾರದು, ಅದನ್ನೂ ಮೀರಿದ ಬುದ್ಧಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು, ಇದಕ್ಕೆ ಪೂರಕವಾಗಿ ಇಂತಹ ರಾಜ್ಯಮಟ್ಟದ ಸ್ಪರ್ಧೋತ್ಸವಗಳು ನಡೆಯುತ್ತಿದ್ದು ಬಹುಮಾನಗಳಿಕೆಗಿಂತ ಭಾಗವಹಿಸುವಿಕೆಯಿಂದಲೇ ಬುದ್ಧಿ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಹಾಗೂ ವೃದ್ಧಿಸಿಕೊಳ್ಳಬಹುದು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳ 17 ಕಾಲೇಜುಗಳಿಂದ 29 ತಂಡಗಳಲ್ಲಿ 232 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಎಂಟು ವೈವಿಧ್ಯಮಯ ಸ್ಪರ್ಧೆಗಳು ಇಲ್ಲಿ ಏರ್ಪಾಡಾಗಿವೆ ಎಂದರು.
Bapuji Institute of Management and Research ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ದೇಶಕ ಡಾ ಸ್ವಾಮಿ ತ್ರಿಭುಬನಾನಂದ ಹೆಚ್ ವಿ ಪ್ರಾಸ್ತಾವಿಕ ನುಡಿಗಳ ನಾಡಿದರು. ಪ್ರಾಂಶುಪಾಲ ಡಾ. ಪ್ರಕಾಶ್ ಎಸ್ ಅಳಲಗೇರಿ, ವಿಭಾಗ ಮುಖ್ಯಸ್ಥ ಡಾ. ಸುಜಿತ್ ಕುಮಾರ್ ಎಸ್ ಹೆಚ್, ಡಾ. ವಿಜಯ್ ಕೆ ಎಸ್ ಉಪಸ್ಥಿತಿಯಲ್ಲಿ ಸಂಜನಾ ವಿ ಎನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಡಾ. ಶ್ರುತಿ ಕೆ ಕೋರಿದರು. ಪ್ರಜ್ವಲ್ ಜೆ ಪಿ, ನರೇಶ್ ಹೆಚ್ ಯು ತಂಡಗಳ ಪರಿಚಯ ಮಾಡಿದರು. ಬೋಧಕ ವರ್ಗದ ಡಾ. ಚೈತ್ರ ಕೆ ಎಸ್, ಪ್ರೊಫೆಸರುಗಳಾದ ಸತೀಶ್ ಡಿ ರಾಯ್ಕರ್, ಸರೋಜಾ ಸಾದರ್, ಮೊಹಮ್ಮದ್ ಎಂ, ಸುಬ್ರಹ್ಮಣ್ಯ, ಸಹನ್ ಸಿ ವೈ, ವನೀಶ್ ಡಿ ಪಟೇಲ್, ರಾಜಶ್ರೀ ಬಿ ಆರ್, ಅಕ್ಷಯ್ ಹೋಲೂರ್, ಸಂಜಯ್ ಸಿ, ಸಿರೀಶ ವಿ, ಮಂಜುನಾಥ್ ಭಾಗವಹಿಸಿದ್ದು ಡಾ ಶ್ರುತಿ ವಂದನೆ ಸಲ್ಲಿಸಿದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ-
