Wednesday, September 16, 2026
Wednesday, September 16, 2026

Shimoga News ರಾಜ್ಯ ಸರ್ಕಾರದ ಕೃಷಿಪರಿಕರ ಮಾರಾಟ ನೀತಿ ವಿರೋಧಿಸಿ ಏಪ್ರಿಲ್ 27 ರಂದು ವಹಿವಾಟು ಬಂದ್- ರಾಕೇಶ್ ಗೌಡ.

Date:

Shimoga News ರಾಜ್ಯದ ಕೃಷಿ ಪರಿಕರ ಮಾರಾಟಗಾರರಿಗೆ ರಾಷ್ಟ್ರ ಹಾಗೂ ರಾಜ್ಯದ ಕೃಷಿ ಪರಿಕರ ಮಾರಾಟದ ನೀತಿ ರೀತಿಗಳು ಮಾರಕವಾಗಿದ್ದು ಅದನ್ನು ವಿರೋಧಿಸಿ ಏ. 27 ರ ಸೋಮವಾರ ರಾಜ್ಯಾದ್ಯಂತ ಎಲ್ಲ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಒಂದು ದಿನದ ಬಂದ್ ಆಚರಿಸಲಾಗುವುದೆಂದು ರಾಜ್ಯ ಸಮಿತಿಯ ಉಪಾಧ್ಯಕ್ಷ ರಾಕೇಶ್ ಗೌಡ ಹೇಳಿದರು. ‌‌‌‌
ಅವರು ಇಂದು ಮದ್ಯಾಹ್ನ ಜಿಲ್ಲಾ ಕೃಷಿ ಪರಿಕರ ಮಾರಾಟಗಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುರ್ತುಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ರೈತರ ಬಹುಕಾಲದ ಬೇಡಿಕೆಗಳಾದ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳ ಜೊತೆ ಮುತ್ತು ಪೂರಕವಾಗಿ ಬೇರೆ ಉತ್ಪನ್ನಗಳನ್ನು ಉತ್ಪಾದಕರು ಲಿಂಕ್ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಎಲ್ಲ ರಸಗೊಬ್ಬರಗಳ ಮೇಲೆ ಶೇಕಡ ಎಂಟು ಪರ್ಸೆಂಟ್ ಡೀಲರ್ ಲಾಭಾಂಶ ಇರುವ ಇರುವ ರೀತಿಯಲ್ಲಿ ನಿಗದಿ ಮಾಡಬೇಕು ಎಲ್ಲ ರಸಗೊಬ್ಬರಗಳನ್ನು ಅಂಗಡಿಯವರೆಗೂ ಕೊಡುವ ಹಾಗೆ ಕ್ರಮ ಕೈಗೊಳ್ಳ ಬೇಕಲ್ಲದೆ ಯಾವುದೇ ಪರಿಕರಗಳು ಕಳಪೆ ಎಂದು ಕಂಡು ಬಂದಾಗ ಉತ್ಪಾದಕ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬಾರದೆಂದು ಒತ್ತಾಯಿಸುವುದಲ್ಲದೆ ಮತ್ತಿತರ ಅನೇಕ ಕೃಷಿ Shimoga News ಪರಿಕರ ಮಾರಾಟ ನೀತಿಗಳನ್ನ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
ಇದೇ ತಿಂಗಳ 27ರ ಸೋಮವಾರದಂದು ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿಗಳನ್ನು ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಬಂದ್ ಗೆ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೀರಶೇಕರ್ ವಹಿಸಿದ್ದರು ಉಪಾಧ್ಯಕ್ಷ ರುಗಳಾದ ಈಶ್ವರಪ್ಪ ಮತ್ತು ನಾಗೇಶ್ ಬಾಬು ಸಂಘದ ಕಾರ್ಯದರ್ಶಿ ಸಿ. ಲೋಕೇಶ್ವರ ಮತ್ತಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...