ನಮ್ಮೂರ ಬಳಗದ ವತಿಯಿಂದ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ದರ್ಶನಿಕ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಎಂ ವಿಜಯ್ ರವರು ಅದ್ವೈತ ತತ್ವದ ಜೊತೆಗೆ ವೇದಾಂತದ ಸತ್ಯವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಮಾನವ ಕಲ್ಯಾಣದ ಸಂದೇಶ ಸಾರಿ “ಎಲ್ಲರಿಗಾಗಿ ಶಂಕರ… ಎಲ್ಲೆಡೆಯೂ ಶಂಕರ…” ಎಂಬ ಆಶಯದಂತೆ ಸರ್ವರಿಗೂ ಜಗದ್ಗುರುಗಳ, ನಮ್ಮ ಧರ್ಮದ ಮೌಲ್ಯಗಳನ್ನು ತಿಳಿಸುವ ಸಂಕಲ್ಪ ಮಾಡೋಣ ನಮ್ಮ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು
ಕಾರ್ಯಕ್ರಮಕ್ಕೆ ವಿಶೇಷವಾಗಿ ಕವಿಗಳಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮೊಮ್ಮಗ ಚೈತನ್ಯ ಮಾಸ್ತಿ ರವರು ಆಗಮಿಸಿ ಶುಭ ಕೋರಿದರು
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್ ಪಿ ಗಿರೀಶ್, ರಾಜೇಶ್ ಮಂದಾರ,ಎಸ್ ಬಸವರಾಜ್, ಪ್ರಶಾಂತ್ ರಾಯ್ , ಆರ್ ಕಿರಣ್ ,ಟಿ ಪಿಆರ್ ಸಂತೋಷ್ ವಕೀಲರು, ಗುರುಪ್ರಸಾದ್, ಎಂ. ರಾಕೇಶ್, ಕೆ ಎಲ್ ಪವನ್, ಕರಾಟೆ ವಿನೋದ್, ಮುರುಳಿ ಸಣ್ಣಕ್ಕಿ, ಕೇಶವ ಸಿಗೆಹಟ್ಟಿ , ಎಂ.ಸುಹಾಸ್, ಗಿರೀಶ್ ಶಾಸ್ತ್ರಿ, ಭವಾನಿ ರಾವ್, ಪೈಂಟರ್ ಕೃಷ್ಣಪ್ಪ ಇದ್ದರು
