B.Y. Raghavendra ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಸಂಸದ ರಾಘವೇಂದ್ರ ಸುದ್ದಿಗೋಷ್ಟಿ
ಸುದ್ದಿಗೋಷ್ಟಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಬಸವಣ್ಣನವರು ಮಹಿಳಾ ಸ್ವಾತಂತ್ರ್ಯಕ್ಕೆ ನೀಡಿದ್ದ ಮಹತ್ವವನ್ನ ಕೊಂಡಾಡಿದರು.
ಸ್ತ್ರೀ ಸ್ವಾತಂತ್ರ್ಯಕ್ಕೆ ಬಸವಣ್ಣರ ಅನುಭವ ಮಂಟಪದಲ್ಲಿ ಜಯ ಸಿಕ್ಕಿತ್ತು
ಲಿಂಗ ಸಮಾನತೆ, ಅಣ್ಣ ಬಸವಣ್ಣರ ವಿಚಾರಗಳು ಪ್ರಪಂಚಕ್ಕೆ ದಾರಿದೀಪವಾಗಿವೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳಿಂದ ಈಗ
ಬಸವಣ್ಣರ ವಿಚಾರ, ಸ್ತ್ರೀ ಸ್ವಾತಂತ್ರ್ಯಕ್ಕೆ ತಣ್ಣೀರು ಎರಚುವ ಕೆಲಸ ಆಗಿದೆ.
ನಾರಿಶಕ್ತಿ ವಂದನಾ ನಿಯಮ್ ಜಾರಿ ಮಾಡಲು ಕೇಂದ್ರ ಮುಂದಾಗಿತ್ತು
ಸಂವಿಧಾನ 131ನೇ ತಿದ್ದುಪಡಿ, ಕ್ಷೇತ್ರ ಮರು ವಿಂಗಡಣೆ, ಕೇಂದ್ರಾಡಳಿತ ಪ್ರದೇಶ ತಿದ್ದುಪಡಿ ಮಸೂದೆ,
ಮಹಿಳಾ ಮೀಸಲಾತಿಗೆ ಪೂರಕವಾದ ಮೂರು ಮಸೂದೆ ತರಲಾಗಿತ್ತು ಎಂದು ನುಡಿದರು.
ಮಲೆನಾಡಿನ ಸಮಸ್ಯೆಗಳು ಅದರಲ್ಲಿ ಪ್ರಮುಖವಾಗಿರುವ ಹೊಸ ನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಬಗ್ಗೆ ಮಾತನಾಡುತ್ತಾ ನನಗೂ ಸಂಸತ್ತಿನಲ್ಲಿ ವುಚಾರ ಮಂಡಿಸಲು ಅವಕಾಶ ಸಿಕ್ಕಿತ್ತು.
ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಿಶೇಷವಾಗಿ ಜನಸಂಖ್ಯೆ ಪರಿಗಣಿಸಬಾರದು
ಹೊಸನಗರ ಜನರ ಪರವಾಗಿ ಅವರ ಧ್ವನಿಯನ್ನ ಮುಟ್ಟಿಸಿದ್ದೇನೆ
ಕಾಂಗ್ರೆಸ್ ಸುಳ್ಳು ವಿಚಾರವಿಟ್ಟು, ತಡೆಯುವ ಷಡ್ಯಂತ್ರ ಮಾಡಿದೆ.
ಮುಸ್ಲಿಂ ಗೆ ಅವಕಾಶ ಇಲ್ಲ ಎಂದು ಹೇಳ್ತಾರೆ
ಧರ್ಮಾಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ.
ದೇಶವನ್ನ ವಿಭಜನೆ ಮಾಡ್ತಾರೆ ಅಂತ ಷಡ್ಯಂತ್ರ ಮಾಡಿದ್ರು.
ದಕ್ಷಿಣದ ರಾಜ್ಯಗಳು ಉತ್ತರದ ರಾಜ್ಯಕ್ಕಿಂತ ಹೆಚ್ಚು ಜನಸಂಖ್ಯೆಯ ಶಿಸ್ತನ್ನ ಕಾಪಾಡಿಕೊಂಡಿವೆ.
ದಕ್ಷಿಣ ಭಾರತ ವಿಚಾರಕ್ಕೆ ಅನ್ಯಾಯವಾಗುತ್ತೇ ಎಂದು ಹೇಳಿದ್ರು..
ಇದೇ ಕಾರಣಕ್ಕೆ ಪ್ರಸ್ತುತ ಕ್ಷೇತ್ರಗಳ ಜೊತೆ ಶೇ.50 ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಹೇಳಿತ್ತು
ಸಾಮಾಜಿಕ ನ್ಯಾಯದ ಮಸೂದೆಯನ್ನ ದುರುದ್ದೇಶದಿಂದ ವಿರೋಧಿಸಿದ್ದಾರೆ.
B.Y. Raghavendra ಮಹಿಳೆಯರಿಗಾದ ಅವಮಾನವನ್ನ ಮರೆಯಲು ಸಾಧ್ಯವಿಲ್ಲ.
ಮಸೂದೆ ಬಿದ್ದಾಗ ಕಾಂಗ್ರೆಸ್ ನವರು ವಿಜಯೋತ್ಸವದ ಸಂಭ್ರಮಾಚರಣೆ ಮಾಡ್ತಾರೆ..
ಇವರು ಯಾವ ನೈತಿಕತೆ ಇಟ್ಟು ಮಹಿಳಾ ಸಬಲೀಕರಣ, ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾರೆ..?
ಕಾಂಗ್ರೆಸ್ ನ ಈ ನಡೆ ನಿಜಕ್ಕೂ ಶೋಚನೀಯ.
ಡಿಜಿಟಲ್ ಯುಪಿಐ, ಜನ ಧನ್, ಜಿಎಸ್ಟಿ ಸೇರಿದಂತೆ ಎಲ್ಲದ್ದಕ್ಕೂ ವಿರೋಧ ಮಾಡಿದ್ದರು.
ಸುಳ್ಳು ಹೇಳಿ ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಕಾಂಗ್ರೆಸ್ ಮಾಡಿದೆ
ಕಾಂಗ್ರೆಸ್ ಪಕ್ಷವನ್ನ ಈ ದೇಶದ ಮಹಿಳೆಯರು ಕ್ಷಮಿಸಲ್ಲ
ದೇಶದ ಪಾಲಿಗೆ ಏಪ್ರಿಲ್ -16 ಕರಾಳ ದಿನವಾಯಿತು.
ದೇಶದ ಪ್ರತಿ ಮನೆ- ಮನೆಗೂ ಈ ವಿಷಯ ಮುಟ್ಟಿಸುವ ಕೆಲಸವನ್ನ ನಾವು ಮಾಡ್ತೇವೆ
ಶಿವಮೊಗ್ಗದಲ್ಲೂ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಛೀಮಾರಿ ಹಾಕಿಸ್ತೇವೆ
ಮೋದಿಯವರು ಹಿಂದೇಟು ಹಾಕಲ್ಲ. ಮತ್ತೊಮ್ಮೆ ಪ್ರಯತ್ನ ಮುಂದುವರೆಸ್ತಾರೆ ಎಂದು ಬಿ.ವೈ.ರಾಘವೇಂದ್ರ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
