Cricket ಕಾಲೇಜು ಜೀವನದ ಓದಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ದೈಹಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಮಾನಸಿಕವಾಗಿಯೂ ಕೂಡ ಓದಲು ಅನುಕೂಲವಾಗುತ್ತದೆ. ಬೇರೆ-ಬೇರೆ ರಾಷ್ಟçಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ನಾವೂ ಕೂಡಾ ಕ್ರೀಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮ ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ನಡೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ ಇಂದು ಈ ಕ್ರಿಕೆಟ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಅವಕಾಶ ನಿಮ್ಮದಾಗಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಪರಿಗಣಿಸಿ, ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂತೋಷವಾಗಿದೆ. ಈಗಾಗಲೇ ನಮ್ಮ ಕಾಲೇಜಿನ ಕ್ರಿಕೆಟ್ ಮೈದಾನವು ನೆಕ್ಸ್÷್ಟ ಜೆನ್ ಸ್ಪೋರ್ಟ್ಸ್ & ಕಲ್ಚರಲ್ ಟ್ರಸ್ಟ್ (ರಿ.), ಸಂಸ್ಥೆಯ ಶ್ರೀ ಶಶಾಂಕ ಎಲ್.ಜಿ. ಇವರ ನೇತೃತ್ವದಲ್ಲಿ ರಾಜ್ಯ ಕ್ರಿಕೆಟ್ ಕ್ರೀಡಾಂಗಣ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ. ಈ ಮೈದಾನವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕೆಂದು ಎಲ್.ಬಿ. ಕಾಲೇಜು ಚಾಂಪಿಯನ್ ಶಿಪ್ ಟ್ರೋಫಿ ಪಂದ್ಯಾವಳಿಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್ರವರು ಉದ್ಘಾಟಿಸಿ ಮಾತನಾಡಿದರು. ಮೊದಲು ಶ್ರೀ ವಿನಯ, ಉಪನ್ಯಾಸಕರು ಸ್ವಾಗತಿಸಿದರು. ಒಟ್ಟು ೮ ತಂಡಗಳು ಎರಡು ದಿನಗಳ ಕಾಲ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ. ಈ ೨ ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ನ್ಯೂ ಕಾಮಾಕ್ಷಿ ಜುವೆರ್ಸ್, ಸಾಗರ, ಮೆಣಸಗಾರ್ ಟೆಕ್ಸ್ಟೈಲ್ಸ್ ತಾಳಗುಪ್ಪ, ರತನ್ ಬೋರ್ವೆಲ್ಸ್, ಆವಿನಹಳ್ಳಿ, ರಾಘವೇಂದ್ರ ಡಿಸ್ಟಿçಬ್ಯೂರ್ಸ್, ಸಾಗರ, Cricket ಸಿದ್ಧಿವಿನಾಯಕ ಕೆಟರ್ಸ್, ಸಾಗರ, ಪರಿಶ್ರಮ ಡೆಕೋರೆರ್ಸ್, ಮನ್ಮನೆ, ಗಿರ್ವಾಣ ಭಾರತಿ ಟ್ರöಸ್ಟ್ (ರಿ.) ಎನ್.ಜಿ.ಒ. ಸಾಗರ, ವಿಜಯ್ ಎಲೆಕ್ಟಿçಕಲ್ ಇಂಫ್ರ (ಲಿ.) ಬೆಂಗಳೂರು, ಆಯುರ್ವೇದಿಕ್ ಫಾರ್ಮಸಿಟಿಕಲ್ ಡಿಸ್ಟಿçಬ್ಯೂರ್ಸ್ ಸಾಗರ, ಶ್ರೀ ಪ್ರತಿಷ್ಠಾನಮ್ (ರಿ.), ಹೊರಬೈಲು, ಸೊರಬ ಇವರುಗಳು ಪ್ರಾಯೋಜಕತ್ವನ್ನು ವಹಿಸಿದ್ದರು. ಕ್ರಿಕೆಟ್ ಉದ್ಘಾಟನೆಯಲ್ಲಿ ಅತಿಥಿಗಳಾಗಿ ಡಾ. ಹೆಚ್.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ, ಮ.ಅ.ಪ್ರ., ಶ್ರೀ ಕೆ. ವೆಂಕಟೇಶ್, ಕೋಶಾಧ್ಯಕ್ಷರು, ಮ.ಅ.ಪ್ರ., ಶ್ರೀ ಎಮ್.ಆರ್. ಸತ್ಯನಾರಾಯಣ, ಸಹಕಾರ್ಯದರ್ಶಿ, ಮ.ಅ.ಪ್ರ., ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷಿö್ಮÃಶ ಎ.ಎಸ್., ಶ್ರೀ ಭರತ್ರಾಜ್, ದೈಹಿಕ ನಿರ್ದೇಶಕರು, ಎಲ್.ಬಿ. ಮತ್ತು ಎಸ್.ಬಿ. ಎಸ್. ಕಾಲೇಜು, ಶ್ರೀ ಶಶಾಂಕ ಎಲ್.ಜಿ., ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
Cricket ಓದಿನ ಜೊತೆ ಕ್ರೀಡೆಗೂ ಹೆಚ್ಚನ ಆಸಕ್ತಿ ತೋರಿಸಿ- ಬಿ.ಆರ್.ಜಯಂತ್.
Date:
