Friday, August 7, 2026
Friday, August 7, 2026

“ಹಳಗೋಡು” ಮಕ್ಕಳ ಬೇಸಿಗೆ ಶಿಬಿರ, ಒಂದು ವಿನೂತನ ಅನುಭವ- ಮಂಜುಳ ರಾಜು

Date:

ನಮ್ಮ ಸಮಾಜ ದಲ್ಲಿ ಅನೇಕರು ತಮ್ಮದೇ ರೀತಿಯಲ್ಲಿ
“ಸಮಾಜ ಮುಖಿ” ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿದ್ದಾರೆ. ಅಂತಹವರು ಸರ್ಕಾರದ ಅಥವಾ ಇನ್ನಿತರರ ಯಾವುದೇ ಸಹಾಯ ಬಯಸದೇ ತಮ್ಮಷ್ಟಕ್ಕೆತಾವೇ ಏನಾದರೊಂದು ಕೆಲಸ ಮಾಡುತ್ತಾ ಅದರಲ್ಲಿ ತಮ್ಮ ಸಾರ್ಥಕತೆಯನ್ನು ಪಡೆಯುತ್ತಾರೆ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ.ಸಾಗರದ ಸಮೀಪದ “ಹಳಗೋಡಿ”ನಲ್ಲಿ ನೆಲೆಸಿರುವ ಕೃಷಿಕದಂಪತಿಗಳಾದ ಸುರೇಂದ್ರ ಹಾಗೂ ವಿಜಯಶ್ರೀ, ಮೂಲತಹ ರಂಗಭೂಮಿ ಕಲಾವಿದರಾದ ವಿಜಯಶ್ರೀ ಅವರು ತಮ್ಮ ವೃತ್ತಿ ಕೃಷಿಯೊಂದಿಗೆ,ಹತ್ತಿರದ ಸರಕಾರಿ ಶಾಲೆಗೆ ಹೋಗಿ ಮಕ್ಕಳಿಗೆ ಬರವಣಿಗೆ,ನೃತ್ಯ ಹಾಡು, ರಂಗ ತರಬೇತಿ ನೀಡುತ್ತಾರೆ. ಮತ್ತು ಪ್ರತಿ ವರ್ಷ ಏಪ್ರಿಲ್ ನಲ್ಲಿ ಸುತ್ತಮುತ್ತಲಿನ ಮಕ್ಕಳಿಗೆ ಉಚಿತವಾದ ಬೇಸಿಗೆ ಶಿಬಿರ “ಪಚ್ಚೆಹಬ್ಬ” ನಡೆಸುತ್ತಾರೆ.
ಸಂಪನ್ಮೂಲ ವ್ಯತ್ತಿಗಾಗಿ ಅವರ ಸ್ನೇಹಿತರು ವಿವಿಧ ಕ್ಷೇತ್ರಗಳಲ್ಲಿ ಆಸಕ್ತರಾದವರು ಅವರಿಗೆ ಬೆಂಬಲನೀಡುತ್ತಾರೆ. ರಂಗನಟ ಬರ್ಟಿ ಪ್ರತಿವರ್ಷ ಅವರೊಂದಿಗಿರುತ್ತಾರೆ. ಕಲಾವಿದರು, ಸಂಗೀತಗಾರರು ನೃತ್ಯಪಟುಗಳು ಮಕ್ಕಳನ್ನು ಹತ್ತುದಿನ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ನಿನ್ನೆ ಹೋಗಿದ್ದೆವು. ಮಕ್ಕಳಿಗೆ ಕಥೆಗಳನ್ನು ಹೇಳಿ, ಆಟ ಆಡಿಸಿ ಕೆಲವು ಹೊಲಿಗೆ. ಕಸೂತಿ ತರಬೇತಿ ನೀಡಿದೆವು ಹಳ್ಳಿಯ ಮುಗ್ಧ ಮಕ್ಕಳೊಂದಿಗೆ ಕಳೆದ ದಿನ ಚೇತೋಹಾರಿಯಾಗಿತ್ತು.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೊರಜಗತ್ತಿನ ಪರಿಚಯ ಈ ಮೂಲಕ ಆಗುತ್ತಿರುವುದು, ಇದಕ್ಕೆ ಅನುವುಮಾಡಿಕೊಟ್ಟ ವಿಜಯಶ್ರೀ ಸುರೇಂದ್ರ ದಂಪತಿಗಳ ಪರಿಶ್ರಮವನ್ನು ಮೆಚ್ಚಲೇ ಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....