ಶಿವಮೊಗ್ಗ ನಗರದ ಅಲ್ಕೋಳ ಸರ್ಕಲ್ನಿಂದ ಡಿ.ವಿ.ಜಿ. ಸರ್ಕಲ್ವರೆಗೆ ಇರುವ ಶ್ರೀ ಎಸ್. ಬಂಗಾರಪ್ಪ ರಸ್ತೆಯಲ್ಲಿ, ಸಾರ್ವಜನಿಕ ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆಯ ಎರಡೂ ಬದಿಗಳ ಪುಟ್ಪಾತ್ ಹಾಗೂ ರಸ್ತೆಯ ಮೇಲಿಟ್ಟಿದ್ದ ತಿಂಡಿ ಗಾಡಿಗಳು ಮತ್ತು ಹಣ್ಣಿನ ಅಂಗಡಿಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳ ಸಹಕಾರದೊಂದಿಗೆ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಜೊತೆಗೆ, ಎಲ್ಲಾ ಪುಟ್ಪಾತ್ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಸೋಮವಾರ ಈ ಪ್ರದೇಶದ ವ್ಯಾಪಾರಸ್ಥರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಆಲ್ಕೊಳದ ಬಂಗಾರಪ್ಪ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಇಕ್ಕೆಲ ತಿಂಡಿಗಾಡಿಗಳ ತೆರವು
Date:
