Wednesday, September 16, 2026
Wednesday, September 16, 2026

Art of Living in Bangalore ಆರ್ಟ್ ಆಫ್ ಲಿವಿಂಗ್ ಎಂದರೆ ಒಂದು ತತ್ವ. ಜೀವನದಲ್ಲಿ ಪೂರ್ಣವಾಗಿ ಬದುಕುವ ತತ್ವಶಾಸ್ತ್ರ.- ಶ್ರೀರವಿ ಶಂಕರ್ ಗುರೂಜಿ

Date:

Art of Living in Bangalore ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಸಮಾಜದ ಗಣ್ಯ ವ್ಯಕ್ತಿಗಳ ಭೇಟಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರತಿನಿಧಿಗಳು ಭೇಟಿ ಮಾಡಿ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕ ಶ್ರೀ ರವಿಶಂಕರ್ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಒಂದು ತತ್ವ. ಜೀವನವನ್ನು ಪೂರ್ಣವಾಗಿ ಬದುಕುವ ತತ್ವಶಾಸ್ತ್ರ. ಮೂಲ ಮೌಲ್ಯವೆಂದರೆ ನಮ್ಮೊಳಗೆ ಶಾಂತಿಯನ್ನು ಕಂಡುಕೊಳ್ಳುವುದು ಮತ್ತು ನಮ್ಮ ಸಮಾಜದಲ್ಲಿ ವಿಭಿನ್ನ ಸಂಸ್ಕೃತಿಗಳು, ಸಂಪ್ರದಾಯಗಳು, ಧರ್ಮಗಳು, ರಾಷ್ಟ್ರೀಯತೆಗಳ ಜನರನ್ನು ಒಂದುಗೂಡಿಸುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಶಿವಮೊಗ್ಗದಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರಬಲ ಅಸ್ತಿತ್ವ ಹೊಂದಿದ್ದು, ಒತ್ತಡ ಕಡಿಮೆ ಮಾಡುವ ಸುದರ್ಶನ ಕ್ರಿಯಾ ತಂತ್ರದ ಸುತ್ತ ಕೇಂದ್ರೀಕೃತವಾದ ಪರಿವರ್ತನಾ ಕೋರ್ಸ್ ಗಳನ್ನು ಒದಗಿಸುವ ಯೋಗ, ಧ್ಯಾನ ಮತ್ತು ಸೇವಾ ಯೋಜನೆಗಳಿಗಾಗಿ ತರಗತಿಗಳು, ಸಕ್ರಿಯ ಶಾಖೆಗಳನ್ನು ಒಳಗೊಂಡಿದೆ ಎಂದರು.
ಶಿವಮೊಗ್ಗ ಶಾಖೆಯ ಸ್ವಯಂಸೇವಕ, ರಾಜ್ಯ ಶಿಕ್ಷಕ ಸಂಯೋಜಕ ಮೂರ್ತಿ ಮಾತನಾಡಿ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಧಾರಿತ, ಲಾಭರಹಿತ, ಮಾನವೀಯ ಮತ್ತು ಶೈಕ್ಷಣಿಕ ಸರ್ಕಾರೇತರ ಸಂಸ್ಥೆ ಆಗಿದ್ದು, ಒತ್ತಡ-ಮುಕ್ತ ಮತ್ತು ಹಿಂಸಾಚಾರ ಮುಕ್ತ ಸಮಾಜವನ್ನು ಸೃಷ್ಟಿಸುವ ದೃಷ್ಟಿಕೋನ ಹೊಂದಿದೆ ಎಂದರು.
Art of Living in Bangalore ನಿಯೋಗದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಶಕ್ತಿ ಇನ್ ಕಾರ್ಪೋರೇಷನ್ ಸಂಸ್ಥೆಯ ಶಿಲ್ಪಾ ಗೋಪಿನಾಥ್, ಶಿವಮೊಗ್ಗ ಶಾಖೆಯ ಸ್ವಯಂಸೇವಕ ಶಿಕ್ಷಕ ಪ್ರಕಾಶ್, ಮಂಜುನಾಥ್, ಸಂದೀಪ್, ಶಿವಮೊಗ್ಗ ಜಿಲ್ಲೆಯ ವಿವಿಧ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...