Ugadi ಯುಗ+ಆದಿ=ಯುಗಾದಿ(ಹೊಸ ಯುಗದ ಆರಂಭ ಎಂದು)
“ಯುಗಾದಿ ” ಚೈತ್ರಮಾಸದಮೊದಲದಿನ ಭಾರತದ ಅನೇಕ ಕಡೆಗಳಲ್ಲಿಈ ದಿನ ಹೊಸವರ್ಷದ ಮೊದಲ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.
ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಿನಿಂದ ಹಿಡಿದು ಡಿಸೆಂಬರ್ ತಿಂಗಳ ಕೊನೆಯ ದಿನದವರೆಗಿನ ಕಾಲವನ್ನುಒಂದುವರ್ಷವೆಂದು ಹೇಳುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರವೆಂದರೆ ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಿಂದ ಪ್ರಾರಂಭವಾಗಿ ಫಾಲ್ಗುಣ ಮಾಸದ ಅಮಾವಾಸ್ಯೆಯ ವರೆಗಿನ ಕಾಲವನ್ನು ಒಂದುಸಂವತ್ಸರವೆನ್ನುತ್ತಾರೆ.
ಈಗಿರುವ ವಿಶ್ವಾವಸುನಾಮ ಸಂವತ್ಸರ ಮುಗಿದು ಹೊಸ ಸಂವತ್ಸರ”ಪರಾಭವ”ಸಂವತ್ಸರ.ಹೆಸರಿನಲ್ಲೇ ಇರುವಂತೆ ಈ ಸಂವತ್ಸರ ಎಲ್ಲರಲ್ಲಿಯೂ ಅಹಂಕಾರ, “ಪರಾಭವ”ವನ್ನು ಮತ್ತು ಪ್ರೀತಿಯನ್ನು ಬೆಳೆಸುವುದೆಂಬ ನಂಬಿಕೆ ಇದೆ.
ಯುಗಾದಿಯ ದಿನ ಸುಖದ ಸಂಕೇತವಾದ
ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮರಸವಾಗಿ ಸ್ವೀಕರಿಸುವಪದ್ಧತಿ ನಡೆದು ಬಂದಿದೆ.
ಬೇವು-ಬೆಲ್ಲವನ್ನು ಸ್ವೀಕರಿಸುವಾಗ ಹೇಳುವ ಶ್ಲೋಕ ಈ ಕೆಳಕಂಡಂತಿದೆ.
“ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ/
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ/ಭಕ್ಷಣಂ//
Ugadi ನೂರು ವರ್ಷಗಳ ಆಯುಷ್ಯ ಸದೃಢ ಆರೋಗ್ಯ,ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲವನ್ನು
ಸೇವನೆ ಮಾಡುತ್ತೇನೆ.,ಎಂಬುದು ಶ್ಲೋಕದ ಅರ್ಥ.
ಈ ಹೊಸ ಸಂವತ್ಸರದ “ಯುಗಾದಿ” ಯನ್ನು ಸಂಭ್ರಮ,ಸಂತೋಷದಿಂದಸ್ವಾಗತಿಸೋಣ. ಎಲ್ಲರಿಗೂ ಆ ದಯಾಮಯಿಯಾದ ಭಗವಂತನು ಹೊಸದಾಗಿ ಬರುತ್ತಿರುವ “ಪರಾಭವ” ನಾಮ ಸಂವತ್ಸರದಲ್ಲಿ ಆಯುರಾರೋಗ್ಯ,ಐಶ್ವರ್ಯ,ಸುಖ,ಶಾಂತಿ ಜ್ಞಾನ ಸಂಪತ್ತು ಕರುಣಿಸಲಿ ಎಂತ ಶುಭ ಕೋರುತ್ತೇವೆ.
ಯುಗಾದಿಹಬ್ಬದ ಶುಭಾಶಯಗಳೊಂದಿಗೆ
