ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ಶ್ರೀ ವಜ್ರೇಶ್ವರಿ ವಿನಾಯಕ ಸೇವಾ ಟ್ರಸ್ಟ್ನ ೨೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮಾ.17 ರ ಸಂಜೆ 7.30ಕ್ಕೆ ಶ್ರೀ ವಿನಾಯಕ ಪ್ರಾರ್ಥನೆ, ಪುಣ್ಯಾಹ, ಕುಂಭಾಧಿವಾಸ, ಸಪ್ತಶುದ್ಧಿ, ವಾಸ್ತುಮ ರಾಕ್ನೋಘ್ನ ಹೋಮ, ವಸ್ತು ಬಲಿ, ದಿಗ್ಬಲಿ, ಪೂರ್ಣಹುತಿ, ಮಹಾಮಂಗಳಾರತಿ ನಡೆಯಲಿದೆ.
ಮಾ.17ರ ಮಂಗಳವಾರ ಬೆಳಿಗ್ಗೆ 9ಕ್ಕೆ ದ್ವಾದಶ ನಾರಿಕೇಳ ಗಣಯಾಗ, ಪೂರ್ಣಹುತಿ, ಕುಂಭಾಭಿಷೇಕ, 12.10ಕ್ಕೆ ಬ್ರಹ್ಮ ಕುಂಭಾಷೇಕ 12.30ಕ್ಕೆ ಮಹಾಂಗಳಾರತಿ, ಮಧ್ಯಾಹ್ನ ೧ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ಮಾ.17ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ದೇವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 17. ಶಿವಮೊಗ್ಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
Date:
