Friday, June 19, 2026
Friday, June 19, 2026

ಸೊರಬದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ

Date:

ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘನೆಗಳ ವತಿಯಿಂದ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ಹಿಂದೂ ಬಾಂಧವರು ಸಂಭ್ರಮದಿಂದ ಹೋಳಿ ಹಬ್ಬದ ಅಂಗವಾಗಿ ರಂಗ ಪಂಚಮಿ ಆಚರಿಸಿದರು.
ಭ್ರಾತೃತ್ವದ ಕೊಂಡಿ ಬೆಸೆಯುವ ಹಬ್ಬದ ಅಂಗವಾಗಿ ಯುವ ಜನತೆ ಡಿಜೆ ಸದ್ದಿಗೆ ರೈನ್ ಡ್ಯಾನ್ಸ್ ಮಾಡುವ ಮೂಲಕ ಸಂತಸಪಟ್ಟರು. ಹಾಡುಗಳ ಸದ್ದಿಗೆ ಹಿರಿಯರು, ಕಿರಿಯರೆನ್ನೆದೇ ಎಲ್ಲರೂ ಜೊತೆಗೂಡಿ ಹೆಜ್ಜೆಹಾಕಿದರು. ಪರಸ್ಪರ ಬಣ್ಣ ಹಚ್ಚುವ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ರೈನ್ ಡ್ಯಾನ್ಸ್ ಮಾಡಲು ಯುವತಿಯರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಂಗ ಪಂಚಮಿ ಆಚರಣೆಗೆ ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್ ಚಾಲನೆ ನೀಡಿದರು. ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ನಿರಂಜನ್, ಜಿಲ್ಲಾ ಕಾರ್ಯದರ್ಶಿ ಎಚ್.ಎಲ್. ಚಂದನ್, ತಾಲೂಕು ಕಾರ್ಯದರ್ಶಿ ಸಾತ್ವಿಕ್, ಸಹ ಕಾರ್ಯದರ್ಶಿ ನಂದನ್ ಕುಮಾರ್, ಬಜರಂಗದಳದ ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಸಹ ಸಂಯೋಜಕ ಬಿ. ಶಶಿಕುಮಾರ್, ತಾಲೂಕು ಸಂಯೋಜಕ ಉಮಾಶಂಕರ್, ಸಹ ಸಂಯೋಜಕ್ ಮಣಿ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...