Monday, March 2, 2026
Monday, March 2, 2026

ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಯಶಸ್ವಿ

Date:

ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಭಾನುವಾರ ಮಥುರಾ ಪ್ಯಾರಾಡೈಸ್ ಹೋಟೆಲ್ ನಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷರಾದ ಡಾ. ಎಸ್. ಜಿ. ಸಾಮಕ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಇತಿಹಾಸ ಸಂಶೋಧಕರೂ, ಪುರಾತತ್ವ ಇಲಾಖೆಯ ನಿರ್ದೇಶಕರೂ ಆಗಿದ್ದ ಶ್ರೀಯುತ ಟಿ.ಎಮ್. ಕೇಶವ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಳೆದ ವರ್ಷದಲ್ಲಿ ನಡೆದ ವೇದಿಕೆಯ ಚಟುವಟಿಕೆಗಳನ್ನು ಕುರಿತು ಚರ್ಚಿಸಲಾಯಿತು. ತಾಳಗುಂದ ಉತ್ಖನನ, ಅಲ್ಲಿ ದೊರೆತಿದ್ದ ಸಿಂಹ ಕತಾಂಜನ ಶಾಸನ ಕುರಿತು ಪುರಾತತ್ವ ಇಲಾಖೆ ಸೂಚನಾ ಫಲಕ ಹಾಕಲು ಈ ಹಿಂದೆ ಎಂ. ಪಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅದ ತೀರ್ಮಾನವನ್ನು ಮತ್ತೊಮ್ಮೆ ಜ್ಞಾಪಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಪುರಂದರ ದಾಸರ ಜನ್ಮ ನೆಲೆಯಂದು ಬಿಂಬಿತವಾಗಿರುವ ಆರಗ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಸ್ತೃತ ಅಧ್ಯಯನ ಕೈಗೊಳ್ಳಬೇಕು ಬೇಕೆಂದು ನಿರ್ಣಯಿಸಲಾಯಿತು.
ಹಾಗೆಯೆ ಕಳೆದ ಸಾಲಿನಲ್ಲಿ ಮತ್ತು ಇದೇ 2026 ರಲ್ಲಿ ನಡೆದ ಹಂಪಿ ಉತ್ಸವದಲ್ಲಿ ಪ್ರಭಂಧ ಮಂಡಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಲಾಯಿತು.
ಕಾರ್ಯದರ್ಶಿ ದಿಲೀಪ್ ನಾಡಿಗ್ ಕಳೆದ ಸಾಲಿನ ಆಯ- ವ್ಯಯ ಮಂಡಿಸಿದರು. ಆದಿತ್ಯ ನಂಜವಳ್ಳಿ ವಂದನಾರ್ಪಣೆ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಸಂಸ್ಕೃತಿ ಎಂಬುದು ಒಂದು ನಡವಳಿಕೆ : ಎಸ್ ಎನ್. ಚನ್ನಬಸಪ್ಪ

S. N. Channabasappa ಹಿಂದೂ ಮತ್ತು ಸಂಸ್ಕೃತಿ ಎಂಬುದು ಬೇರೆಯಲ್ಲ. ಸಂಸ್ಕೃತಿ...

Shivaganga Yoga Center ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ಯೋಗಾಭ್ಯಾಸ ಅವಶ್ಯ: ಎಸ್.ರುದ್ರೇಗೌಡ

Shivaganga Yoga Center ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿ ದಿನ...

Yakshasamvardana Trust ಶಿವಮೊಗ್ಗದ ಯಕ್ಷ ಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ ಯಶಸ್ವಿ

Yakshasamvardana Trust ಶಿವಮೊಗ್ಗದ ಯಕ್ಷಸಂವರ್ಧನಾ ಸಂಸ್ಥೆಯ ವಾರ್ಷಿಕೋತ್ಸವ ಯಕ್ಷಸಿಂಚನ-2026 ನಿನ್ನೆ ಮತ್ತು...