Thursday, July 23, 2026
Thursday, July 23, 2026

S.N. Channabasappa ಊರುಗಡೂರು ಕೊಲೆ ಪ್ರಕರಣ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿಲ್ಲ: ಶಾಸಕ ಎಸ್.ಎನ್.ಚನ್ನಬಸಪ್ಪ

Date:

S.N. Channabasappa ಶಿವಮೊಗ್ಗ ಹೊರವಲಯದ ಊರುಗಡೂರಿನಲ್ಲಿ ಅಪ್ರಾಪ್ತ ಬಾಲಕನ ಹತ್ಯೆ ವಿಚಾರವಾಗಿ
ಘಟನೆಯ ಕುರಿತು ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ನವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಇಂದು ನಡೆದಿರುವ ಘಟನೆ ಅತ್ಯಂತ ದುಃಖ ತಂದಿದೆ.
ವಿಶೇಷ ತರಗತಿ ಮುಗಿಸಿಕೊಂಡು ಹೊರಟಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ. ಇನ್ನೊಬ್ಬನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಹೋದ ವಿದ್ಯಾರ್ಥಿ ಜೀವ ಕಳೆದುಕೊಂಡಿದ್ದಾನೆ ಎಂದಿದ್ದಾರೆ. ಇಂದು ಬೆಳಗ್ಗೆ ಊರಗಡೂರಿನ ಪರಿಸ್ಥಿತಿಯ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲ ಆಗಿದೆ.

ಹಿಂದುಗಳ ಹತ್ಯೆ ನಡೆದಾಗ ಅವರ ಹೆಣ ಹೊರಲು ಪೊಲೀಸರು ಬರುತ್ತಾರೆ.
ಘಟನೆ ಸಂಬಂಧ ಕೆಲವರನ್ನ ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಹೋದ ಜೀವ ಮತ್ತೆ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಶಿರಾಳಕೊಪ್ಪದಲ್ಲೂ ಸಹ ನಿನ್ನೆ ಇಂಥದೇ ಘಟನೆ ನಡೆದಿದ್ದು,
ಆದಾಗಿಯೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿಲ್ಲ.
ಕೇವಲ ಹತ್ಯೆಗೀಡಾದ ಹಿಂದುಗಳ ಪೋಸ್ಟ್ ಮಾರ್ಟಂ ಹಾಗೂ ಶವದ ಮೆರವಣಿಗೆಗೆ
ಪೊಲೀಸರು ಸೀಮಿತವಾಗಿದ್ದಾರೆ. ಅವರ ಉಪವಾಸದ ಹಬ್ಬದಲ್ಲೂ ಹಿಂದುಗಳ ಮೇಲೆ ಹಲ್ಲೆ ಮುಂದುವರೆದಿದೆ‌‌
ದ್ವಿಚಕ್ರ ವಾಹನದಲ್ಲಿ ಮೂರ್ನಾಲ್ಕು ಜನರು ದೊಣ್ಣೆ ಹಿಡಿದು ಓಡಾಡುವುದು ಮಾಮೂಲಿಯಾಗಿದೆ ಎಂದಿದ್ದಾರೆ.

S.N. Channabasappa ಮತ್ತೂರು ಸುತ್ತಮುತ್ತಲ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮೇಲೂ ಹಲ್ಲೆ ನಡೆಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.
ಈ ಬಗ್ಗೆ ಏನಾದರೂ ಹೇಳಲು ಹೋದರೆ ನಮ್ಮನ್ನು ಕೋಮುವಾದಿಗಳು ಎಂದು ಹೇಳುತ್ತಾರೆ.
ಹಾಗೆಂದು ಇಂತಹ ಕೃತ್ಯವನ್ನು ನೋಡಿ ನಾವು ಸುಮ್ಮನಿರಬೇಕೇ ಎಂದಿದ್ದಾರೆ.

ಹೊಸ ಎಸ್ಪಿ ಘಟನೆಯ ಕುರಿತು ಕಥೆಯನ್ನು ಹೇಳುತ್ತಾರೆ.
ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...