ವಿನೋಬನಗರದ ಚಾಚಾ ನೆಹರೂ ಪಾರ್ಕ್ ಪಕ್ಕದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನದ ಹಿಂಭಾಗದಲ್ಲಿರುವ ಲಿಂಗ ಮುದ್ರೆಕಲ್ಲು ಮುಂಭಾಗ ಸಾಮೂಹಿಕ ರುದ್ರ ಹೋಮವನ್ನು ಫೆ.16ರ ಬೆಳಿಗ್ಗೆ 10:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಚೈತನ್ಯ ಸಮಿತಿ ತಿಳಿಸಿದೆ.
ಎಸ್.ದತ್ತಾತ್ರಿ ಭಟ್ರ ಪ್ರಧಾನ ಪೌರೋಹಿತ್ಯದಲ್ಲಿ ರುದ್ರಹೋಮ ನಡೆಯಲಿದ್ದು, ಸೇವಾ ಶುಲ್ಕ 250 ರೂ.ಇದ್ದು, ಫೆ.15ರ ಸಂಜೆಯೊಳಗಾಗಿ ಹೆಸರು ನೋಂದಾಯಿಸುವಂತೆ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ.ಕೆ.ಮುರುಳೀಧರ್ ಭಟ್ ತಿಳಿಸಿದ್ದಾರೆ.
ಫೆ.19. ಶಿವಮೊಗ್ಗದಲ್ಲಿ ಸಾಮೂಹಿಕ ರುದ್ರಹೋಮ ಆಯೋಜನೆ
Date:
