ಶರಾವತಿ ನಗರ 9ನೇ ಕ್ರಾಸ್, ಪಿಎನ್ಟಿ ಕಾಲೊನಿ ಪಕ್ಕದ ರಸ್ತೆ, ವಿನೋಬನಗರದಿಂದ ಪೆಟ್ರೋಲ್ ಬಂಕ್ ಪಕ್ಕ ಕುವೆಂಪು ರಸ್ತೆಗೆ ಸೇರುವ ನಾಲ್ಕು ರಸ್ತೆಗಳು ಸೇರುವ ಜಾಗದಲ್ಲಿ ಕಳೆದ ಹಲವಾರು ತಿಂಗಳುಗಳಿAದ ನಿತ್ಯವೂ ಅಪಘಾತ ಗಳು ಸಂಭವಿಸುತ್ತಿದ್ದು, ಕೂಡಲೆ ಈ ಭಾಗದಲ್ಲಿ ಹಂಪ್ಸ್ ಹಾಕಲು ಒತ್ತಾಯಿಸಿದ್ದಾರೆ.
ಇಲ್ಲಿ ಸಮರ್ಪಕ ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು ಹಾಗೂ ಹಂಪ್ಗಳ ತಪ್ಪು ವಿನ್ಯಾಸ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಈ ದಿನ ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದೆ. ಇದೇ ಸ್ಥಳದಲ್ಲಿ ಕೆಲ ತಿಂಗಳ ಹಿಂದೆ ಕಾರೊಂದು ಕಾಂಪೌಂಡ್ ಗೋಡೆ ಹಾಗೂ ನಗರಸಭೆಯ ಡಿಸ್ಪ್ಲೇ ಕಂಬಕ್ಕೆ ಡಿಕ್ಕಿ ಸಂಭವಿಸಿದ ಘಟನೆ ಕೂಡ ನಡೆದಿದೆ.
ಬಹುತೇಕ ಅಪಘಾತಗಳು ನಡೆದು ಆಸ್ಪತ್ರೆಗೆ ಸೇರಿಸಿರುವ ಉದಾಹರಣೆ ಕೂಡ ಇದೆ. ಘಟನೆಗೆ ಸಂಬಂಧಿಸಿದಂತೆ ಅಧಿಕೃತ ದೂರುಗಳು ದಾಖಲಾಗುತ್ತಿಲ್ಲ. ಈ ಕುರಿತು ಸಾರ್ವಜನಿಕರು ಸಂಚಾರಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ, ಇದುವರೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವಿದೆ. ಆದ್ದರಿಂದ, ಸಂಚಾರ ಪೊಲೀಸ್ ಇಲಾಖೆ, ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಂಪ್ಸ್ಗಳನ್ನು ಸರಿಯಾಗಿ ಮರು ನಿರ್ಮಾಣ ಮಾಡಲು ಒತ್ತಾಯಿಸಿದ್ದಾರೆ. ಜೊತೆಗೆ ಈ ಭಾಗದಲ್ಲಿ ಅಗತ್ಯ ಸೂಚನಾ ಫಲಕಗಳು ಮತ್ತು ವೇಗ ನಿಯಂತ್ರಣ ಸಿಸಿ ಟಿವಿ ಅಳವಡಿಸಿ, ಯಾವುದೇ ಅಮೂಲ್ಯ ಜೀವ ಕಳೆದುಹೋಗುವ ಮುನ್ನವೇ ತ್ವರಿತ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕುವೆಂಪು ರಸ್ತೆಯಲ್ಲಿ ಹಂಪ್ಸ್ ನಿರ್ಮಿಸಲು ಮನವಿ
Date:
