IMA KARNATAKA ಮನುಷ್ಯ ಆತ್ಮತೃಪ್ತಿ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಜೀವನ ಸಾರ್ಥಕ ಆಗುತ್ತದೆ ಎಂದು ವೈದ್ಯ, ಬರಹಗಾರ ಡಾ. ಕೆ.ಪಿ.ಪುತ್ತುರಾಯ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತಸದಿಂದ ಇರುವುದ ಹೇಗೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಆನಂದಗಳಲ್ಲಿ ಮೂರು ವಿಧ ಇದ್ದು, ದೈಹಿಕ ಆನಂದ, ಚಿದಾನಂದ ಮತ್ತು ಆತ್ಮಾನಂದ ಆಗಿದ್ದು, ಆತ್ಮಾನಂದವೇ ಬದುಕಿಗೆ ಮುಖ್ಯವಾಗಿದೆ. ಅದನ್ನು ಸಾಧಿಸಿದಾಗ ಜೀವನ ಸಾರ್ಥಕ ಎನಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಐಎಂಎ ಶಿವಮೊಗ್ಗದಲ್ಲಿ “ಪರಿಸರ ವೈದ್ಯರಾಗಿ” ಕೆಲಸ ಮಾಡುವ ಉದ್ದೇಶದಿಂದ “ಐಎಂಎ ಎನ್ವಿರಾನ್ಮೆಂಟ್ ಕ್ಲಬ್” ಉದ್ಘಾಟಿಸಲಾಯಿತು. ಡಾ. ರತ್ನಾಕರ್ ಮತ್ತು ಡಾ. ಪ್ರೀತಿ ಪೈ ಅವರು ಸಂಯೋಜಕರಾಗಿ, ವೈದ್ಯರ ಕ್ಲಬ್ನಿಂದ ವಿವಿಧ ಪರಿಸರ ಸಂರಕ್ಷಿಸುವ ಕಾರ್ಯಕ್ರಮಗಳನ್ನು ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಲಿದೆ.
ವಾಯುಮಾಲಿನ್ಯ, ಅಶುದ್ಧ ನೀರು, ಹವಾಮಾನ ಬದಲಾವಣೆ, ಶಬ್ದ ಮಾಲಿನ್ಯ ಹಾಗೂ ರಾಸಾಯನಿಕಗಳಿಂದ ಉಸಿರಾಟದ ರೋಗಗಳು, ಹೃದಯ ರೋಗಗಳು, ಕ್ಯಾನ್ಸರ್, ಅಲರ್ಜಿಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ವೈದ್ಯರು ಪ್ರತಿದಿನ ಈ ಪರಿಣಾಮಗಳಿಗೆ ಚಿಕಿತ್ಸೆ ನೀಡುತ್ತಾರೆ. ಕಾರಣವನ್ನು ತಡೆಯುವುದೂ ಸಹ ವೈದ್ಯಕೀಯ ಕರ್ತವ್ಯವೇ ಆಗಿರುತ್ತದೆ.
IMA KARNATAKA ಪರಿಸರ ಸಂರಕ್ಷಣೆಯು ಆರೋಗ್ಯದ ಪ್ರಾಥಮಿಕ ಅಂಶ ಮಾಲಿನ್ಯ ತಡೆಗಟ್ಟುವುದು. ಶುದ್ಧ ಗಾಳಿ, ಸುರಕ್ಷಿತ ನೀರು, ಹಸಿರು ವಾತಾವರಣ ಮತ್ತು ಕಡಿಮೆ ತ್ಯಾಜ್ಯವು ಅನೇಕ ರೋಗಗಳನ್ನು ತಡೆಯಬಹುದು. ಇದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಇದೇ ಸಂದರ್ಭದಲ್ಲಿ ಡಾ. ವಿನಯಾ ಶ್ರೀನಿವಾಸ್ ಅವರ ಸಂಪಾದಕತ್ವದಲ್ಲಿ “ಐಎಂಎ ಶಿವಮೊಗ್ಗ ಪಲ್ಸ್” ನಿಯತಕಾಲಿಕ ಬಿಡುಗಡೆ ಆಯಿತು. ಕಾರ್ಯಕ್ರಮದಲ್ಲಿ ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಜಾಂಚಿ ಡಾ. ಎಚ್.ಎಲ್.ಶಶಿಧರ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭ ಅರುಣ್, ಡಾ. ಜೀವಂತಿ, ಡಾ. ಪ್ರೀತಿ ಪೈ ಉಪಸ್ಥಿತರಿದ್ದರು.
