Banashankari Devi Jatra ಬನದ ಹುಣ್ಣಿಮೆ ಪ್ರಯುಕ್ತ ಬಾಪೂಜಿ ನಗರದಲ್ಲಿ ಶ್ರೀ ಮಾತಾ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಎರಡು ದಿನ ಅದ್ದೂರಿಯಾಗಿ ಜರುಗಿತು.
ಶನಿವಾರ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಎರಡು ದಿನ ವೈಭವದಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಶುಕ್ರವಾರ ಅಮ್ಮನವರ ರಾಜಬೀದಿ ಪಲ್ಲಕ್ಕಿ ಉತ್ಸವ ನಡೆಯಿತು. ಎಲ್ಲ ಭಕ್ತರಿಗೂ ಅನ್ನಸಂತರ್ಪಣೆ ವಿತರಿಸಲಾಯಿತು.
ಶನಿವಾರ ಶ್ರೀ ಮಾತಾ ಬನಶಂಕರಿ ಅಮ್ಮನವರಿಗೆ 108 ಲೀಟರ್ ಎಳನೀರು, ಕ್ಷೀರಾಭಿಷೇಕ, ದುರ್ಗಾ ಹೋಮ, ಸುಹಾಸಿನಿ ಪೂಜೆ, ಮಹಾ ಮಂಗಳಾರತಿ ನಡೆಯಿತು. ರಥೋತ್ಸವ ಸಮಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಮಧ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Banashankari Devi Jatra ರಾಜಕೀಯ ಮುಖಂಡರು, ಸ್ವಾಮೀಜಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ನಗರ ದೇವಾಂಗ ಸಮಾಜದ ಅಧ್ಯಕ್ಷ ಬಿ.ಸತೀಶ್ ಕುಮಾರ್ ಹಾಗೂ ಆಡಳಿತ ಮಂಡಳಿ ಅತ್ಯಂತ ವ್ಯವಸ್ಥಿತವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ನಗರ ದೇವಾಂಗ ಸಮಾಜದ ಉಪಾಧ್ಯಕ್ಷ ಯು.ರಾಮಪ್ಪ ರಾಂಪುರ, ಎಂ.ವಾಸುದೇವಪ್ಪ, ಕಾರ್ಯದರ್ಶಿ ಡಿ.ಪರಶುರಾಮಪ್ಪ, ಪ್ರಮುಖರಾದ ಬಿ.ಸಿ.ವೆಂಕಟೇಶ್, ಟಿ.ಆರ್.ಮಂಜುನಾಥ್, ಡಿ.ಎಚ್.ನಾಗರಾಜಪ್ಪ, ಎಸ್.ಶಾಂತಾ ವೆಂಕೋಬ, ಎಂ.ಗುರುಶಾಂತಪ್ಪ, ಎಚ್.ಎಸ್.ಹಾಲೇಶಪ್ಪ, ಎಚ್.ಎಚ್.ಕಮಲಾಕ್ಷಪ್ಪ, ಡಿ.ಎಚ್.ಕುಮಾರ್, ಡಿ.ಟಿ.ವೆಂಕಟೇಶ್, ಎಸ್.ಶೇಷಪ್ಪ, ಬಿ.ನರಸಿಂಹಪ್ಪ, ಡಿ.ಜಿ.ಚಂದ್ರಶೇಖರ್, ಪಿ.ಟಿ.ರಂಗನಾಥಪ್ಪ, ಟಿ.ಶಂಕರಪ್ಪ, ಡಿ.ಎಚ್.ಶೇಖರಪ್ಪ, ಆರ್.ಮಣಿಕಂಠ, ಕೆ.ಬಿ.ಸಂದೀಪ್, ಎಂ.ಮಂಜುನಾಥ, ಕೆ.ಎಸ್.ಬಂಗಾರ ಶೆಟ್ಟಿ, ಬಿ.ಪ್ರೇಮಾ ಗಿರಿಯಪ್ಪ, ಪಿ.ಆರ್.ಗಿರಿಯಪ್ಪ, ಜಿ.ಮೋಹನಮೂರ್ತಿ, ಟಿ.ರಾಜೇಶ್, ಎನ್.ಸುರೇಶ್, ಜಯಮ್ಮ ಚಂದ್ರಶೆಟ್ಟಿ, ಉಮಾ ನಾಗರಾಜ್ ಮತ್ತಿತರರು ಇದ್ದರು.
