Monday, May 4, 2026
Monday, May 4, 2026

Guru Basava Mahaswamiji ಪರಮ ತಪಸ್ವಿ ಶ್ರೀ ಗುರುಬಸವ ಮಹಾಸ್ವಾಮೀಜಿ

Date:

Guru Basava Mahaswamiji ಸಕಲರಿಗೆ  ಲೇಸನೇ ಬಯಸುವ  ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ  ನುಡಿ ಸಂಪತ್ತಾದ  ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ   ಹೊತ್ತುಕೊಂಡು  ಕರ್ನಾಟಕದ ನಾಲ್ಕು  ಮೂಲೆಗಳಿಗೆ ಗುಂಪು ಗುಂಪಾಗಿ ಹೊರಟರು. ಅಕ್ಕನಾಗಮ್ಮ ಮತ್ತು  ಚನ್ನ ಬಸವಣ್ಣನವರ ಜೊತೆಗೆ ಕೆಲ  ಶರಣ ಶರಣೆಯರು ಉಳವಿಯ ಕಡೆ  ಸಾಗಿದರೆ, ಮತ್ತೆ ಕೆಲವರು ಆಂಧ್ರ ನಾಡಿನ ಕಡೆ ಹೊರಟರು. ಇನ್ನು  ಕೆಲವರು ದಕ್ಷಿಣದ ಚಿಕ್ಕಮಗಳೂರು ಸಕಲೇಶಪುರದ ಕಡೆ ಸಾಗಿದರು. ಮತ್ತೆ ಕೆಲವರು  ತಮಿಳುನಾಡಿನ  ಗಡಿ ಭಾಗದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟನಾಡಿನ ಕಡೆಗೆ  ನಡೆದರು. 
ಈ ರೀತಿ ನಾಡಿನ ನಾನಾ ಕಡೆ ಚದುರಿ ಹೋದ ಶರಣರಲ್ಲಿ ಒಬ್ಬರಾದ ಗಂಗಾಧರಯ್ಯನವರು  ದಕ್ಷಿಣದ ಕಡೆ ಸಾಗಿ ಬಂದು ಈಗಿನ Guru Basava Mahaswamiji ಶಿವಮೊಗ್ಗ ನಗರಕ್ಕೆ ಸಮೀಪವಿರುವ  ಯಲವಟ್ಟಿ ಗ್ರಾಮದ ಪಕ್ಕದಲ್ಲಿರುವ ಹಸಿರು ಪರಿಸರದ ನಡುವೆ ತಲೆ ಎತ್ತಿ ನಿಂತಿರುವ ಚಿಕ್ಕ ಬೆಟ್ಟದ ಮೇಲೆ ಇದ್ದ ಗವಿಯೊಂದರಲ್ಲಿ ನೆಲೆ ನಿಂತು ಅನುಷ್ಠಾನ  ಮಾಡುತ್ತಿದ್ದರು. ಅವರು ಪೂಜೆಯನ್ನು  ಮಾಡುತ್ತಿದ್ದ ಸಮಯದಲ್ಲಿ  ಎರಡು   ಪುನುಗಿನ ಬೆಕ್ಕುಗಳು  ಆ ಬೆಟ್ಟದ  ಗವಿಯಲ್ಲಿ ದ್ದವು.  ಅವುಗಳಲ್ಲಿ  ಒಂದು ಗಂಟೆ ಬಾರಿಸುವ  ಮತ್ತೊಂದು ಜಾಗಟೆ ಸದ್ದು ಮಾಡುತ್ತಾ ಅಲ್ಲಿ  ಅನುಷ್ಠಾನ ಮಾಡುತ್ತಿದ್ದ ಗುರುಗಳು   ಮಮತೆ ಯಿಂದ ನೀಡುತ್ತಿದ್ದ  ಹಾಲಿನ  ಪ್ರಸಾದವನ್ನು  ಸೇವಿಸುತ್ತಿದ್ದವು ಎಂಬುದು ಅಲ್ಲಿಯ ಗ್ರಾಮದ ಹಿರಿಯರು  ತಲೆ ತಲಾಂತರದಿಂದ ಕೇಳಿ ಬಂದಿದ್ದ  ಕಥೆಯಾಗಿತ್ತು. ಆದುದರಿಂದ ಗುರುಗಳು ಇದ್ದ  ಮಠ ಕಲ್ಲಿನ ಗವಿಮಠವಾಗಿದ್ದುದು ಬೆಕ್ಕಿನಕಲ್ಮಠ ಎಂದು  ಹೆಸರಾಯಿತು.
ಇದು ಗ್ರಾಮದವರು ಹೇಳಿ ಕೇಳಿ ಬಂದ ಜನಜನಿತ ಕಥೆಯಾದರೆ, ಇತಿಹಾಸ ಸಂಶೋಧಕರು ಮತ್ತೊಂದು ರೀತಿಯಲ್ಲಿ  ತಿಳಿಸುತ್ತಾರೆ. ಬಹುಪೂರ್ವದಲ್ಲಿ ಬೌದ್ಧ ಭಿಕ್ಷುಗಳು ಇಲ್ಲಿ ಧ್ಯಾನ ಮಾಡುತ್ತಿದ್ದದ್ದು ಇದಾಗಿತ್ತು.  ಆ  ಬೌದ್ಧ ಭಿಕ್ಷುಗಳು ಇದ್ದ ಸ್ಥಳ  ಇದಾಗಿದ್ದು ಗ್ರಾಮಸ್ಥರ ಮಾತಿನಲ್ಲಿ ಭಿಕ್ಷುಗಳು ಇದ್ದ ಮಠ ಭಿಕ್ಷು ಬಿಕ್ಕು ಎಂದಾಗಿ ಕಡೆಗೆ …ಕಡೆಗೆ ಬಿಕ್ಕುಗಳ ಮಠ, ಬೆಕ್ಕಿನ ಕಲ್ಮಠ ಆಗಿ ಅಪಭ್ರಂಶವಾಗಿರಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...