Guru Basava Mahaswamiji ಸಕಲರಿಗೆ ಲೇಸನೇ ಬಯಸುವ ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ ನುಡಿ ಸಂಪತ್ತಾದ ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಕರ್ನಾಟಕದ ನಾಲ್ಕು ಮೂಲೆಗಳಿಗೆ ಗುಂಪು ಗುಂಪಾಗಿ ಹೊರಟರು. ಅಕ್ಕನಾಗಮ್ಮ ಮತ್ತು ಚನ್ನ ಬಸವಣ್ಣನವರ ಜೊತೆಗೆ ಕೆಲ ಶರಣ ಶರಣೆಯರು ಉಳವಿಯ ಕಡೆ ಸಾಗಿದರೆ, ಮತ್ತೆ ಕೆಲವರು ಆಂಧ್ರ ನಾಡಿನ ಕಡೆ ಹೊರಟರು. ಇನ್ನು ಕೆಲವರು ದಕ್ಷಿಣದ ಚಿಕ್ಕಮಗಳೂರು ಸಕಲೇಶಪುರದ ಕಡೆ ಸಾಗಿದರು. ಮತ್ತೆ ಕೆಲವರು ತಮಿಳುನಾಡಿನ ಗಡಿ ಭಾಗದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟನಾಡಿನ ಕಡೆಗೆ ನಡೆದರು.
ಈ ರೀತಿ ನಾಡಿನ ನಾನಾ ಕಡೆ ಚದುರಿ ಹೋದ ಶರಣರಲ್ಲಿ ಒಬ್ಬರಾದ ಗಂಗಾಧರಯ್ಯನವರು ದಕ್ಷಿಣದ ಕಡೆ ಸಾಗಿ ಬಂದು ಈಗಿನ Guru Basava Mahaswamiji ಶಿವಮೊಗ್ಗ ನಗರಕ್ಕೆ ಸಮೀಪವಿರುವ ಯಲವಟ್ಟಿ ಗ್ರಾಮದ ಪಕ್ಕದಲ್ಲಿರುವ ಹಸಿರು ಪರಿಸರದ ನಡುವೆ ತಲೆ ಎತ್ತಿ ನಿಂತಿರುವ ಚಿಕ್ಕ ಬೆಟ್ಟದ ಮೇಲೆ ಇದ್ದ ಗವಿಯೊಂದರಲ್ಲಿ ನೆಲೆ ನಿಂತು ಅನುಷ್ಠಾನ ಮಾಡುತ್ತಿದ್ದರು. ಅವರು ಪೂಜೆಯನ್ನು ಮಾಡುತ್ತಿದ್ದ ಸಮಯದಲ್ಲಿ ಎರಡು ಪುನುಗಿನ ಬೆಕ್ಕುಗಳು ಆ ಬೆಟ್ಟದ ಗವಿಯಲ್ಲಿ ದ್ದವು. ಅವುಗಳಲ್ಲಿ ಒಂದು ಗಂಟೆ ಬಾರಿಸುವ ಮತ್ತೊಂದು ಜಾಗಟೆ ಸದ್ದು ಮಾಡುತ್ತಾ ಅಲ್ಲಿ ಅನುಷ್ಠಾನ ಮಾಡುತ್ತಿದ್ದ ಗುರುಗಳು ಮಮತೆ ಯಿಂದ ನೀಡುತ್ತಿದ್ದ ಹಾಲಿನ ಪ್ರಸಾದವನ್ನು ಸೇವಿಸುತ್ತಿದ್ದವು ಎಂಬುದು ಅಲ್ಲಿಯ ಗ್ರಾಮದ ಹಿರಿಯರು ತಲೆ ತಲಾಂತರದಿಂದ ಕೇಳಿ ಬಂದಿದ್ದ ಕಥೆಯಾಗಿತ್ತು. ಆದುದರಿಂದ ಗುರುಗಳು ಇದ್ದ ಮಠ ಕಲ್ಲಿನ ಗವಿಮಠವಾಗಿದ್ದುದು ಬೆಕ್ಕಿನಕಲ್ಮಠ ಎಂದು ಹೆಸರಾಯಿತು.
ಇದು ಗ್ರಾಮದವರು ಹೇಳಿ ಕೇಳಿ ಬಂದ ಜನಜನಿತ ಕಥೆಯಾದರೆ, ಇತಿಹಾಸ ಸಂಶೋಧಕರು ಮತ್ತೊಂದು ರೀತಿಯಲ್ಲಿ ತಿಳಿಸುತ್ತಾರೆ. ಬಹುಪೂರ್ವದಲ್ಲಿ ಬೌದ್ಧ ಭಿಕ್ಷುಗಳು ಇಲ್ಲಿ ಧ್ಯಾನ ಮಾಡುತ್ತಿದ್ದದ್ದು ಇದಾಗಿತ್ತು. ಆ ಬೌದ್ಧ ಭಿಕ್ಷುಗಳು ಇದ್ದ ಸ್ಥಳ ಇದಾಗಿದ್ದು ಗ್ರಾಮಸ್ಥರ ಮಾತಿನಲ್ಲಿ ಭಿಕ್ಷುಗಳು ಇದ್ದ ಮಠ ಭಿಕ್ಷು ಬಿಕ್ಕು ಎಂದಾಗಿ ಕಡೆಗೆ …ಕಡೆಗೆ ಬಿಕ್ಕುಗಳ ಮಠ, ಬೆಕ್ಕಿನ ಕಲ್ಮಠ ಆಗಿ ಅಪಭ್ರಂಶವಾಗಿರಬಹುದು.
Guru Basava Mahaswamiji ಪರಮ ತಪಸ್ವಿ ಶ್ರೀ ಗುರುಬಸವ ಮಹಾಸ್ವಾಮೀಜಿ
Date:
