Monday, February 2, 2026
Monday, February 2, 2026

Kuvempu “ಸುಂದರ ಕವಿ ಕಾಣೋ”ಕುವೆಂಪು ಸ್ಮರಣೆ.-ಡಾ.ಸುಧೀಂದ್ರ.

Date:

Kuvempu ಕುವೆಂಪು ಅವರ ಇಂಗ್ಲಿಷ್ ಕವಿತೆಗಳನ್ನು ಓದಿ ಪರಿಶೀಲಿಸಿದ ಐರಿಷ್ ಕವಿ ಕಸಿನ್ಸ್
“ಏನಿದೆಲ್ಲ ಕಗ್ಗ? .
ನಿಮ್ಮನ್ನ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶಿಯಾಗಿ ಕಾಣುತ್ತೀರಿ.. ಆದರೆ ಕವಿತೆ ಮಾತ್ರ ಸ್ವದೇಶಿಯಲ್ಲ. ನಿಮ್ಮ ಮಾತೇ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ? ಎಂದು ಕೇಳಿದರು.
ನಂತರ ಇಬ್ಬರ ನಡುವೆ ಕಾವ್ಯ, ಇಂಗ್ಲಿಷ್ ಭಾಷೆ ಮತ್ತು ಕನ್ನಡ ಭಾಷೆ ಮೊದಲಾದ ವಿಚಾರಗಳ ಮಾತುಕತೆ ನಡೆಯಿತು.
ಒಟ್ಟಾರೆ ಹೇಲಕಬೇಕೆಂದರೆ ’ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂದು ಕಸಿನ್ಸ್ ‌ ಅಭಿಪ್ರಾಯ ಪಟ್ಟರಂತೆ.

ಆಗ ಇಪ್ಪತ್ತರ ಬಿಸಿ ವಯಸ್ಸಿನ ಯುವಕ ಕುವೆಂಪು, ಆಕ್ಷಣಕ್ಕೆ ಸಹಜವಾಗಿಯೇ ಸಿಟ್ಟುಗೊಂಡರಂತೆ. ಅಂತಹ ಕುಪಿತ ಮನಸ್ಥಿತಿಯಲ್ಲೇ ಅಲ್ಲಿಂದ ಜಾಗ ಖಾಲಿಮಾಡಿದರು.

” ಅದೊಂದು ಮಹತ್ವದ ಹಾಗೂ ಸ್ಮರಣೀಯವಾದ ದಿನ!”ಎಂದು ನೆನಪಿನ ದೋಣಿಯಲ್ಲಿ ಕುವೆಂಪು ಆ ಸಂದರ್ಭವನ್ನು ಕುರಿತು ಕಸಿನ್ಸ್ ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು! ಹಿಂತಿರುಗಿ ಬರುವಾಗಲೇ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆ ರಚಿಸುತ್ತಾ ಗುನುಗುತ್ತಾ ಬಂದೆ ಎಂದು ಬರೆದಿದ್ದಾರೆ.

Kuvempu ಈ ಬದಲಾವಣೆ ಹೊಂದಿದ ನಂತರ ಕುವೆಂಪು ಗಟ್ಟಿಯಾಗಿಯೇ ಬರೆದರು. ಗದ್ಯಧಾಟಿಯಲ್ಲಂತೂ ಅವರ ಶೈಲಿ
ಮನೋಜ್ಞ.ಅನನ್ಯ.
ಕವಿತೆಗಳಲ್ಲಿ ನಿಸರ್ಗ ನರ್ತಿಸುತ್ತದೆ. ನಿಸರ್ಗಕವಿ ಅಂತಲೇ ನಮಗೆ ಅವರು ಜನಜನಿತ.

ಪದವಿ, ಪದಕ, ಬಿರುದು, ಮಾನ‌ ಸಮ್ಮಾನಗಳು ಅವರನ್ನ ಅರಸಿಕೊಂಡು ಬಂದವು. ಕುವೆಂಪು ಅವರೇ ಹೇಳುವಂತೆ” ಛೀ, ಕೀರ್ತಿ ಶನಿ ತೊಲಗಾಚೆ” ಎಂದು ಅವುಗಳನ್ನ ದೂರ ಸರಿಸಿದರು. ಅಷ್ಟೇ ಮೇಲಕ್ಕೇರಿದರು.
ಇಂದವರ ಜನ್ಮದಿನ.
ಸೂರ್ಯೋದಯ,
ಚಂದ್ರೋದಯ ದೇವರ ದಯ ಕಾಣೋ
ಎಂಬಂತೆ ಮಹಾಕವಿಯ ನೆನಪೇ ನಮಗೆ ಒಂದು ಸುಂದರ
” ಅಕ್ಷರಗಳ ಕವಿ ಕಾಣೋ!” ಎಂಬ ಮಿಡಿತ ನಮಗೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...