Monday, February 2, 2026
Monday, February 2, 2026

Shimoga News “ಗಾನ ವಿಮಾನ” ಏರಿದ ಸಹೃದಯರು.ಮತ್ತೆಮತ್ತೆನೆನಪಾದ ‘ಶಿವಮೊಗ್ಗ ಸುಬ್ಬಣ್ಣ ‘

Date:

Shimoga News ದಿನಾಂಕ ೨೮-೧೨-೨೦೨೫ ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಅಭಿರುಚಿ , ಶಾಮಣ್ಣ ಟ್ರಸ್ಟ್, ಕುವೆಂಪು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕುವೆಂಪು ವಿರಚಿತ ಹಾಡುಗಳ ಶಿವಮೊಗ್ಗ ಸುಬ್ಬಣ್ಣ ಹಾಡಿರುವ “ಗಾನ ವಿಮಾನ” ಕಾರ್ಯಕ್ರಮ ನಡೆಯಿತು.
ಶಿವಮೊಗ್ಗ ಸುಬ್ಬಣ್ಣ ,ಮಲೆನಾಡಿಗೆ ಚಿರಪರಿಚಿತರು. ಎಲೆಮರೆಯ ಕಾಯಿ ಆಗಿದ್ದ ಪ್ರತಿಭೆ ಹೊರಜಗತ್ತಿಗೆ ಪರಿಚಯವಾಗಲು ಬಹಳ ಕಾಲ ಬೇಕಾಯಿತು.
“ಕಾಡುಕುದುರೆ ” ಚಿತ್ರದ ಗಾಯನಕ್ಕಾಗಿ ಸುಬ್ಬಣ್ಣ ಅವರಿಗೆ ” ರಾಷ್ಟ್ರಪ್ರಶಸ್ತಿಗೆ ಲಭಿಸಿದಾಗ ಇಡೀ ಕನ್ನಡಿಗರೇ ಹೆಮ್ಮೆ ಪಡುವಂತಾಯಿತು.
ಅಲ್ಲಿಂದ ಸುಬ್ಬಣ್ಷ ಹಿಂತಿರುಗಿ ನೋಡಲೇ ಇಲ್ಲ. ಚಿತ್ರಗೀತೆಗಳೇ ಅಲ್ಲದೇ ಭಾವಗೀತೆಗಳಿಗೆ ಜೀವ ತುಂಬಿ ಹಾಡಿದಾಗ.
ಅವರನ್ನ ಮತ್ತಷ್ಟು ಕನ್ನಡ ಸಂಗೀತ ರಸಿಕರು ಮೆಚ್ಚಿಕೊಂಡರು.
ಕನ್ನಡ ಭಾವಗೀತೆಗಳ ಧ್ವನಿಮುದ್ರಣ ಒಂದು ಉದ್ಯಮ ವ್ಯಾಪ್ತಿ ಪಡೆಯುವಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರ ಕೊಡುಗೆ ಅಪಾರ. ಅವರು ಹಾಡಿದ ಧ್ವನಿಮುದ್ರಿಕೆ,ಕ್ಯಾಸೆಟ್ ಗಳು ಬಿಸಿ ಬಿಸಿ ತಿನಿಸಿನಂತೆ ಮಾರಾಟವಾದವು.
ಕೆಲವು ಧ್ವನಿಮುದ್ರಣ ಕಂಪನಿಗಳು ತಮ್ಮ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಂಡವು ಎನ್ನಬಹುದು.
ಶಿವಮೊಗ್ಗ ಸುಬ್ಬಣ್ಣ ಅವರನ್ನ ಊರು ಶಿವಮೊಗ್ಗ ಮರೆತಿಲ್ಲ.
ಅದಕ್ಕೆ ಸಾಕ್ಷಿಯಾಗಿ
Shimoga News ” ಗಾನ ವಿಮಾನ” ಕಾರ್ಯಕ್ರಮ ಅತ್ಯಂತ ವಿನೂತನ ,ವಿಶಿಷ್ಟವಾಗಿ
ನಡೆಯಿತು.
ವಿನಯ್ ಶಿವಮೊಗ್ಗ ಅವರ ಸೃಜನ ಶೀಲತೆಗೆ ಈ ಕಾರ್ಯಕ್ರಮ ಮೆರುಗು ತಂದಿತು.
ವಿವಿಧ ಕಲಾವಿದರು ಭಾವಗೀತೆಗಳನ್ನ ಹಾಡಿ,ಸುಮಧುರ ವಾತಾವಣ ಸೃಷ್ಟಿಸಿದರು.
ಕುವೆಂಪ ರಂಗಮಂದಿರ ಮತ್ತೊಮ್ಮೆ ಭಾವಗೀತೆಗಳ ಹಕ್ಕಿಗಳ
ಗೂಡಿನಂತೆ ಶೋಭಿಸಿತೆನ್ನಬಹುದು..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...