B.Y.Raghavendra ಆಯುರ್ವೇದ ಎನ್ನುವುದು ಕೇವಲ ವೈದ್ಯಕೀಯ ಚಿಕಿತ್ಸಾ ಪದ್ಧತಿ ಮಾತ್ರವಲ್ಲ, ಅದು ರೋಗ ಬರದಂತೆ ತಡೆಯುವ ಪ್ರಾಚೀನ ಭಾರತದ ಜೀವನ ವಿಧಾನವೂ ಹೌದು. ಪ್ರಕೃತಿಯೊಂದಿಗೆ ಮನುಷ್ಯರ ಅವಿನಾಭಾವ ಸಂಬಂಧ ಬೆಸೆಯುವ ಆಯುರ್ವೇದ ವಿಶ್ವಕ್ಕೆ ಭಾರತದ ಕೊಡುಗೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ‘ಆಯುರ್ವೇದ ವಿಶ್ವ ಶೃಂಗಸಭೆ’ಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ,ಶಾಸಕ ಬಿ.ವೈ.ವಿಜಯೇಂದ್ರ ಅವರು ಭಾಗವಹಿಸಿದ್ದರು.
B.Y.Raghavendra ಈ ಸಂದರ್ಭದಲ್ಲಿ ಹರಿಹರಪುರ ಪರಮಪೂಜ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸ್ವಾಮಿ ನಿತ್ಯಸ್ಥಾನಾನಂದರು, ಗೌರಿಗದ್ದೆಯ ಪೂಜ್ಯ ಶ್ರೀ ಅವದೂತ ವಿನಯ್ ಗುರೂಜಿಗಳು ದಿವ್ಯಸಾನ್ನಿಧ್ಯ ವಹಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದ ಗೌಡ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
