Saturday, December 6, 2025
Saturday, December 6, 2025

Free health check up camp ಆರೋಗ್ಯವೆಂಬುದು ಪ್ರತಿಯೊಬ್ಬರಿಗೂ ಅಮೂಲ್ಯ ಧನ- ಎಂ.ಹರೀಶ್ ನಾಯ್ಕ್

Date:

Free health check up camp ರಾಷ್ಟ್ರ ನಿರ್ಮಾಣದ ಅಭಿಯಾನಿ ಬಾಳೆಗಾವಿ ಶ್ರೀ ಲಕ್ಷ್ಮೀ ಸೇವಾ ಟ್ರಸ್ಟ್ ಹಾಗೂ ಬಿಜೆಪಿ ನಗರ ಘಟಕದ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಳ್ಳಿಹಿಟ್ಟ್ಲಿ ಕ್ರಾಂತ್ ಶಾಲಾ ಆವರಣದಲ್ಲಿ ಆಯೋಜಿಸಲಾಯಿತು.

ಈ ಶಿಬಿರವನ್ನು ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀಮತಿ ವಿಜಯೇಂದ್ರ ಅಪ್ಪಣ್ಣವರ ಪ್ರಮುಖ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.

ಶಿಬಿರದಲ್ಲಿ ಹೃದಯ ತಪಾಸಣೆ, ರಕ್ತದ ಒತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ಕಿವಿ-ಮೂಗು-ಗಂಟಲು (ENT), ಹಲ್ಲು ತಪಾಸಣೆ ಸೇರಿದಂತೆ ಹಲವು ವಿಭಾಗಗಳ ವೈದ್ಯಕೀಯ ಸೇವೆಗಳನ್ನು ಸ್ಥಳದಲ್ಲೇ ಗ್ರಾಮಸ್ಥರಿಗೆ ನೀಡಲಾಯಿತು.

Free health check up camp ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ನಗರಾಧ್ಯಕ್ಷ ಜಗದೀಶ್ ಹಾಗೂ ಶ್ರೀ ಲಕ್ಷ್ಮೀ ಸೇವಾ ಟ್ರಸ್ಟ್ ಸಂಸ್ಥಾಪಕ ಎಂ. ಹರೀಶ್ ನಾಯ್ಕ್ ಅವರು ಶಿಬಿರದ ಮಹತ್ವವನ್ನು ವಿವರಿಸಿದರು.

ಎಂ. ಹರೀಶ್ ನಾಯ್ಕ್ ಮಾತನಾಡುತ್ತಾ —
“ಆರೋಗ್ಯವೆಂಬುದು ಪ್ರತಿಯೊಬ್ಬರಿಗೂ ಅತ್ಯಮೂಲ್ಯ ಧನ. ನಾವು ದಿನನಿತ್ಯದ ಜೀವನದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತೇವೆ, ಆದರೆ ಇಂತಹ ಶಿಬಿರಗಳ ಮೂಲಕ ನಾವು ಅವುಗಳನ್ನು ಗುರುತಿಸಿ ತಕ್ಷಣ ಚಿಕಿತ್ಸೆ ಪಡೆಯಬಹುದು. ಯಾರಿಗಾದರೂ ತುರ್ತು ಆರೋಗ್ಯ ಸಹಾಯ ಬೇಕಾದರೆ ನಮ್ಮ ಟ್ರಸ್ಟ್ ಅವರ ನೆರವಿಗೆ ಸದಾ ಸಿದ್ಧವಾಗಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...