Choudeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸೆ.22 ರಿಂದ ಅ.02ರವರೆಗೆ ಸಂಭ್ರಮದ ಶರನ್ನವರಾತ್ರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಸೆ.22ರಂದು ದೇವಿಗೆ ಅರಿಶಿನಿ ಕುಂಕುಮ ಅಲಂಕಾರ, ಬೆಳಿಗ್ಗೆ 9:30 ರಿಂದ ಶ್ರೀ ದುರ್ಗಾಹೋಮ, 12:30ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.
ಸಂಜೆ 6:30ರಿಂದ ದುರ್ಗಾ ದೀಪ ನಮಸ್ಕಾರ , ಸಂಜೆ 8:00 ರಿಂದ ದೇವಿಗೆ ಉಯ್ಯಾಲೇ ಸೇವೆ 8:30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ
ಪ್ರತಿನಿತ್ಯ ದೇವಿಗೆ ವಿವಿಧ ಅಲಂಕಾರ, ಬೆಳಿಗ್ಗೆ 7:30 ರಿಂದ ಚಂಡಿಕಾಪಾರಾಯಣ ,9:30 ರಿಂದ ಹೋಮ ಪ್ರಾರಂಭ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ.
ಪ್ರತಿನಿತ್ಯ ಸಂಜೆ 6:30 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Choudeshwari Temple ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ : ಚೇತನಭಟ್ ೯೯೮೦೨೪೭೦೮೧, ಕೆ. ಶೇಖರ ೯೪೪೮೮೮೮೧೨೯ ಸಂಪರ್ಕಿಸಬಹುದು
