Saturday, December 6, 2025
Saturday, December 6, 2025

Gallagher Company ರಕ್ತದಾನದಿಂದ ನಮ್ಮ ಆರೋಗ್ಯ ದೃಢವಾಗಿರುತ್ತದೆ- ಹೆಚ್.ಎಸ್.ಶಿವಕುಮಾರ್

Date:

Gallagher Company ಎಲ್ಲ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ ನಾವು ಮಾಡುವ ರಕ್ತದಾನದಿಂದ ಇಂದು ಮೂರು ಜನರ ಪ್ರಾಣವನ್ನು ಉಳಿಸಬಹುದಾಗಿದೆ ವೃತ್ತಿಯ ಜೊತೆಗೆ ಒಳ್ಳೆಯ ಪ್ರವೃತ್ತಿಯು ಸಹ ಅತಿ ಮುಖ್ಯ ಎಂದು ಗ್ಯಾಲ್ಗರ್ ಐಟಿ ಕಂಪನಿಯ ಮುಖ್ಯಸ್ಥರಾದ ಎಚ್ಎಸ್ ಕುಮಾರ್ ಅವರು ಅಭಿಮತ ವ್ಯಕ್ತಪಡಿಸಿದರು. ಗ್ಯಾಲಗರ್ ಕಂಪನಿ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು ನಿರಂತರ ರಕ್ತದಾನದಿಂದ ನಮ್ಮ ಆರೋಗ್ಯ ಸದಾ ಸದೃಢವಾಗಿರುತ್ತದೆ, ಅಲ್ಲದೆ ನಮ್ಮ ದೇಹದಲ್ಲಿ ಯಾವುದಾದರೂ ಗೊತ್ತಿಲ್ಲದ ಕಾಯಿಲೆಗಳ ಸಮಸ್ಯೆಗಳು ಇದ್ದರೂ ಸಹ ಅದು ರಕ್ತದಾನದಿಂದ ತಿಳಿಯುತ್ತದೆ ಎಂದು ನುಡಿದರು. Gallagher Company ಇದೇ ಸಂದರ್ಭದಲ್ಲಿ 119 ಬಾರಿ ರಕ್ತದಾನ ಮಾಡಿದ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರ್ ಅವರು ಮಾತನಾಡುತ್ತಾ ಮನುಷ್ಯನ ದೇಹದಲ್ಲಿ 5:30 ಲೀಟರ್ ಮತ್ತು ರಕ್ತ ಸಂಚರಿಸುತ್ತಾ ಇರುತ್ತದೆ ರಕ್ತದಾನಕ್ಕೆ ಕೇವಲ 350 ಎಂಎಲ್ ಮಾತ್ರ ಬೇಕು ರಕ್ತದಾನ ಮಾಡುವುದರಿಂದ ನಮ್ಮಲ್ಲಿ ಹೊಸ ಹುರುಪು. ಚೈತನ್ಯ ಮೂಡುವುದರ ಜೊತೆಗೆ ನಾವು ಸದಾ ಕಾಲ ಆರೋಗ್ಯವಂತರಾಗಿರುತ್ತೇವೆ ಹಾಗೆ ನಾವುಗಳು ಉತ್ತಮ ಜೀವನಶೈಲಿ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಪ್ರತಿನಿತ್ಯ ಒಂದು ಗಂಟೆಗಳ ಕಾಲ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸುಸ್ಥಿತಿಯಲ್ಲಿ ಇರುತ್ತದೆ ಎಂದು ನುಡಿದರು. ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಕಾರ್ಯದರ್ಶಿಗಳಾದ ಮಂಜುನಾಥ್ ಸಿ ಅಪ್ಪಾಜಿ ಶ್ರೀಯುತ ಧರಣೇಂದ್ರ ದಿನಕರ್ ಡಾ. ದಿನಕರ್ ಶ್ರೀಮತಿ ಶೃತಿ ಎಸ್ ಕೆ ಶ್ರೀಮತಿ ಲಕ್ಷ್ಮಿಬಾಯಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು, ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...