JCI Shimoga ಜೆಸಿಐ ಶಿವಮೊಗ್ಗ ಭಾವನ ದಿಂದ ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ರಸ್ತೆ ಸಂಚಾರ ಸಂಚಾರಿ ನಿಯಮ ಪಾಲನೆಯ ಸೂಚನ ಫಲಕಗಳನ್ನು ಅಳವಡಿಸಿದ್ದು ಈ ಸೂಚನಾ ಫಲಕಗಳನ್ನು ಜೆಸಿಐ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜಿಜುವಾಲಾ ರವರು ಉದ್ಘಾಟಿಸಿದರು. ಅವರು ಮಾತನಾಡಿ ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಸುರಕ್ಷತೆಯಿಂದ ಸಂಚರಿಸುದೊಂದಿಗೆ ಅಪಘಾತಗಳನ್ನು ತಡೆಗಟ್ಟಬಹುದು. ಜೆಸಿಐ ಶಿವಮೊಗ್ಗ ಭಾವನ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಸಂಚಾರಿ ನಿಯಮ ಪಾಲನೆ, ಪರಿಸರ ಕಾಳಜಿ , ಸ್ವಚ್ಛತೆ ,ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರು ನಮ್ಮ ಜೆಸಿಐ ಶಿವಮೊಗ್ಗ ಭಾವನ ತಂಡವು ಈಗಾಗಲೇ ನಗರದ ಹಲವು ಭಾಗಗಳಲ್ಲಿ ಸಂಚಾರ ನಿಯಮಗಳ ಸೂಚನ ಫಲಕಗಳನ್ನು ಅಳವಡಿಸಿ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಸ್ವಚ್ಛತೆ ಪರಿಸರ ಸಂರಕ್ಷಣೆ ಆರೋಗ್ಯ ಹಾಗೂ ಮಹಿಳೆಯರ ಸುರಕ್ಷತೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. JCI Shimoga ಈ ಸಂದರ್ಭದಲ್ಲಿ ಜೆಸಿಐ ವಲಯ ಅಧ್ಯಕ್ಷರಾದ ಗೌರೀಶ್ ಭಾರ್ಗವ್, ವಲಯ ಉಪಾಧ್ಯಕ್ಷರಾದ ಸುದರ್ಶನ್ ತಾಯಿ ಮನೆ, ಜೆಸಿಐ ಭಾವನದ ಪ್ರಮುಖರಾದ ರತ್ನ ಲಕ್ಷ್ಮಿ ನಾರಾಯಣ್, ಪುಷ್ಪಾ ಶೆಟ್ಟಿ, ಪ್ರತಿಮಾ ಡಾಕಪ್ಪ, ಮಾಲಾ ರಾಮಪ್ಪ, ವಂದನಾ ದಿನೇಶ್, ಸುಗುಣ ಸತೀಶ್, ಪೂರ್ಣಿಮಾ ಸುನಿಲ್, ಕನ್ನಿಕಾ, ಸುಶೀಲ ಷಣ್ಮುಗಂ , ಉಷಾ, ಪ್ರೇಮ ಹೆಗಡೆ, ಸುಜಾತ ಬಸವರಾಜ್, ದಿವ್ಯ ಪ್ರವೀಣ್, ಜೆಜೆಸಿ ಜನ್ಯ ರಂಗನಾಥ್, ಶ್ರೀನಾಗ್,ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸಿತರಿದ್ದರು
JCI Shimoga ರಸ್ತೆ ಸಂಚಾರ ನಿಯಮ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ- ಅಂಕುರ್ ಜುಂಜುನ್ ವಾಲಾ
Date:
