Karnataka Sanga Shivamogga ದಿನಾಂಕ 18 ಜುಲೈ ೨೦೨೫ರ ಶುಕ್ರವಾರ, ಸಂಜೆ 5;30 ಕ್ಕೆ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ “ಭಾವಾಂಜಲಿ” ಹೆಚ್.ಎಸ್.ವಿ. ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಸಾಹಿತಿಗಳು, ಉಡುಪಿ ಇವರು ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಕುರಿತು ನುಡಿ ನಮನಗಳನ್ನಾಡಲಿದ್ದಾರೆ. ಶ್ರೀ ಪಾರ್ಥ ಚಿರಂತನ್ ಹಾಗೂ ಕು. ಸಂಜನಾ ಎಸ್. ಕುಮಾರ್ ಇವರಿಂದ ಹೆಚ್.ಎಸ್.ವಿ. ಅವರ ಗೀತೆಗಳ ಗಾನ ನಮನ ಕಾರ್ಯಕ್ರಮವಿರುತ್ತದೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
