ಸಾರ್ವಜನಿಕ ಕ್ಷೇತ್ರವಾದ ಶಿವಮೊಗ್ಗ ನಗರ ನೀರು ಸರಬರಾಜು ಹಾಗೂ ನಗರ ಒಳಚರಂಡಿ ಹಾಗೂ ಜಲ ಮಂಡಳಿ ಇಲಾಖೆಯಲ್ಲಿ ಕೆಲಸ ಮಾಡಿದ ಸರ್ಕಾರಿ ನೌಕರರಂತಹ ಮಿಥುನ್ ರವರು ಶಿವಮೊಗ್ಗ ನಗರದಿಂದ ತುಮಕೂರು ನಗರಕ್ಕೆ ವರ್ಗಾವಣೆಯಾಗಿದ್ದು ಹಾಗೂ ಇತ್ತೀಚೆಗೆ ಒಳಚರಂಡಿ ಮತ್ತು ನಗರ ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದಂತಹ ಬಾಬಣ್ಣ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ವರ್ಗದವರಿಗೂ ಕೆಲಸ ಮಾಡಿ ಸಾಗರದಲ್ಲಿ ಅತ್ಯುತ್ತಮ ಕಾರ್ಯ ದಕ್ಷತೆಯಿಂದ ಕೆಲಸ ಮಾಡಿದ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ವರ್ಷ ಬಿಸಿ ರಾಯ್ ರಾಷ್ಟ್ರಪತಿ ಈ ವರ್ಷ ರಾಜ್ಯ ವೈದ್ಯಶ್ರೀ ಪ್ರಶಸ್ತಿ ಪಡೆದ ಪರಪ್ಪನವರಿಗೆ ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜ ವತಿಯಿಂದ ಬಂಗಾರ ಲೇಪಿತ ವೆಂಕಟೇಶ್ವರ ಫೋಟೋಗಳನ್ನು ಹಾಗೂ ಶಾಲು ಹಾರ ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಕೆ ದೇವೇಂದ್ರಪ್ಪನವರು ಮಾತನಾಡಿದರು. ಅಧ್ಯಕ್ಷತೆಯನ್ನಎಸ್.ಟಿ. ಹಾಲಪ್ಪನವರು ವಹಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಂಸಿ ಬಾಬಣ್ಣನವರು ಮಾಜಿ ಮೇಯರ್ ಕಂಕರಿ ನಾಗರಾಜ್ ಬೊಮ್ಮನಕಟ್ಟೆ ಮಂಜುನಾಥ್. ಕುಂಶಿ ಮೋಹನ್ ಕಾಶಿಪುರ ವಿಜಯಕುಮಾರ್ ಶಿವಮೊಗ್ಗ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಮಾಲತೇಶ್, ಕಾರ್ಯದರ್ಶಿ ಮಂಜುಳಮ್ಮ ಅಣ್ಣಪ್ಪನವರು ಹಾಗೂ ಇತರ ಸಮಾಜದ ಮುಖಂಡರು ಭಾಗವಹಿಸಿದ್ದರು.
ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ, ನಿವೃತ್ತಿ & ಪ್ರಶಸ್ತಿಪಡೆದ ಮೂವರಿಗೆ ಸನ್ಮಾನ
Date:
