Health Center Hole honnur ಆರೋಗ್ಯ ಕೇಂದ್ರ ಹೊಳೆ ಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ” ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದೇವಾನಂದ್ ಆಡಳಿತ ವೈದ್ಯಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಹೊಳೆ ಹೊನ್ನೂರು ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಇಮ್ರಾನ್ ಖಾನ್ ಆರೋಗ್ಯ ರಕ್ಷಾ ಸಮಿತಿ ಸಮಿತಿಯ ಸದಸ್ಯರು ಇವರು ನೆರವೇರಿಸಿದರು. ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕರಾದ ಶ್ರೀ ಪ್ರಶಾಂತ್, ಶ್ರೀ ನಿರಂಜನ್ ಕುಮಾರ್ ನೇತ್ರಾಧಿಕಾರಿ ಇವರು ಉಪಸ್ಥಿತರಿದ್ದರು.
Health Center Holehonnur ಕಾರ್ಯಕ್ರಮದಲ್ಲಿ ಡಾ. ದೇವಾನಂದ್ ಇವರು ಆಶಾಕಿರಣ ದೃಷ್ಟಿ ಕೇಂದ್ರದವು “ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ” ನೀಡಲು ಶುಭಾರಂಭ ವಾಗಿರುವ ಕಾರ್ಯಕ್ರಮವಾಗಿದ್ದು, ಕಣ್ಣಿನ ಸಮಸ್ಯೆ ಇರುವವರು ಸಮುದಾಯ ಆರೋಗ್ಯ ಕೇಂದ್ರ ಕೇಂದ್ರ ದಲ್ಲಿರುವ ಅಶಾ ಕಿರಣ ದೃಷ್ಟಿ ಕೇಂದ್ರದಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕಾಗಿ ತಿಳಿಸಿದರು, ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Health Center Holehonnur ಹೊಳೆಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ”ಕ್ಕೆ ಚಾಲನೆ
Date:
