VSK Karnataka ದಿನಾಂಕ 2-7-25 ರಂದು ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಆರು ಹಿರಿಯ ಪತ್ರಕರ್ತರಿಗೆ ನಾರದ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಲಾಗುವದು. ವಿಶ್ವ ಸಂವಾದ ಕೇಂದ್ರದ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಮುಖ್ಯ ಅಭ್ಯಾಗತರಾಗಿ ತುಂಬಾ ಚನ್ನಾಗಿ ಮಾತನಾಡಿದರು. ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಹಾದಿಗಲ್ಲು ಲಕ್ಷ್ಮೀ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿಯ ಅನಂತ ಪ್ರಕಾಶ ಪತ್ರಿಕೆ ಸಂಪಾದಕ ಶ್ರೀ ಸಚ್ಚಿದಾನಂದ ಉಡುಪ, ಟೈಮ್ಸ್ ಆಫ್ ಇಂಡಿಯಾ, ಪಿಟಿಐ ನ ಹಿರಿಯ ವರದಿಗಾರರಾಗಿದ್ದ ಶಿವಮೊಗ್ಗದ ಶ್ರೀ ಸಿ. ವಿ. ರಾಘವೇಂದ್ರ ರಾವ್, ಬೆಂಗಳೂರಿನ ಪತ್ರಕರ್ತ ಶ್ರೀ ಹಿರಿಯೂರು ರಾಘವೇಂದ್ರ, ಕಟೀಲಿನ ಯಕ್ಷಪ್ರಭಾ ಪತ್ರಿಕೆ ಉಪಸಂಪಾದಕ, ಯಕ್ಷಗಾನ ಕಲಾವಿದ, ಶ್ರೀ ಶ್ರುತಕೀರ್ತಿರಾಜ, ಹೊಸನಗರದ ಹಿರಿಯ ಪತ್ರಕರ್ತರುಗಳಾದ ಶ್ರೀ ರಾಮಕೃಷ್ಣ ಮೂರ್ತಿ, ಶ್ರೀ ಸದಾನಂದ ಇವರುಗಳಿಗೆ ನಾರದ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾಭಾರತಿ ತಂಡದ ಪ್ರಾರ್ಥನೆ, VSK Karnataka ರಾಷ್ಟ್ರೋತ್ಥಾನಬಳಗದ ಅಧ್ಯಕ್ಷ ಶ್ರೀ ನಳಿನಚಂದ್ರರ ಸ್ವಾಗತ, ಗ್ರಾಮಭಾರತಿ ಟ್ರಸ್ಟ್ ಕಾರಣಗಿರಿ ಯ ಅಧ್ಯಕ್ಷರು ಹಾಗೂ ಕಾರಣಗಿರಿ ಕಲಾದರ್ಶನ ಪತ್ರಿಕೆ ಸಂಪಾದಕ ಶ್ರೀ ಹನಿಯರವಿಯವರ ಪ್ರಾಸ್ತಾವಿಕ ನುಡಿ, ಕೊನೆಯಲ್ಲಿ ಕಲಾದರ್ಶನ ಬಳಗದ ವಿನಾಯಕ ಪ್ರಭು ಅವರಿಂದ ವಂದನಾರ್ಪಣೆ ಹಾಗೂ ಉಪನ್ಯಾಸಕರು, ಲೇಖಕರೂ, ಕಲಾದರ್ಶನ ಬಳಗದ ಶ್ರೀಮತಿ ವಸುಧಾ ಚೖತನ್ಯರ ಉತ್ತಮ ನಿರೂಪಣೆಯ ಅಚ್ಚುಕಟ್ಟಾದ ಕಾರ್ಯಕ್ರಮ. ಗ್ರಾಮಭಾರತಿ ಟ್ರಸ್ಟಿನ ಆಶ್ರಯದಲ್ಲಿ ಅನೇಕ ಲೇಖಕ, ಚಿಂತಕ, ಗಣ್ಯಮಾನ್ಯರ ಸಮ್ಮುಖದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಯಿತು. ಪತ್ರಿಕೆಯ ಪೋಷಕರು, ಚಂದಾದಾರರು, ಓದುಗರು ಪಾಲ್ಗೊಂಡು ನಮ್ಮ ಮನಸ್ಸಂತೋಷಪಡಿಸಿದರು.
VSK Karnataka ಕಾರಣಗಿರಿ ಕಲಾದರ್ಶನ ಪತ್ರಿಕೆ ವಾರ್ಷಿಕೋತ್ಸವ. ಹಿರಿಯ ಪತ್ರಕರ್ತರಿಗೆ ನಾರದ ಪುರಸ್ಕಾರ ಪ್ರದಾನ
Date:
