Shivamogga Police ಶಿವಮೊಗ್ಗ ತಾಲೂಕು ಹಳೆ ಮಡಿಕೆಚೀಲೂರು ಗ್ರಾಮ ಎ.ಕೆ.ಕಾಲೋನಿ ವಾಸಿ ರತ್ನಮ್ಮ ಬರ್ಮಪ್ಪ ಎಂಬುವವರ ಮಗ 29 ವರ್ಷದ ಅರುಣ್ ಕುಮಾರ್ ಎಂಬುವವರು ಮೇ 22 ರಂದು ಮನೆಯಿಂದ ನಗರಕ್ಕೆ ಹೋಗಿ ಬರುವುದಾಗಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈತನ ಚಹರೆ 5.3 ಅಡಿ ಎತ್ತರ ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲು ಮತ್ತು ಎಡಕೈ ಬೆರಳು ಅಂಕವಿಕಲವಾಗಿದ್ದು, ನೆಲದ ಮೇಲೆ ಬಲಕೈ ಊರಿಕೊಂಡು ತೆವಳುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.
Shivamogga Police ಈ ವ್ಯಕ್ತಿ ಬಗ್ಗೆ ಸುಳಿವು ದೊರೆತಲ್ಲಿ ಗ್ರಾಮಾಂತರ ವೃತ್ತ ಶಿವಮೊಗ್ಗ ಪೊಲೀಸ್ ಠಾಣೆ ದೂ.ಸಂ.: 08182-261418 /261400/ 9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
Shivamogga Police ಮಡಿಕೆ ಚೀಲೂರಿನಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಮಾಹಿತಿ ಪ್ರಕಟಣೆ
Date:
