Monday, February 2, 2026
Monday, February 2, 2026

Aesthetic International Clinic ಕಿರುತೆರೆ ಕಲಾವಿದರಾದ ದಾಮಿನಿ & ನಿಶಿತಾಗೆ ಸನ್ಮಾನ

Date:

Aesthetic International Clinic ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ವಯಸ್ಸಿನ ಅಗತ್ಯತೆ ಇಲ್ಲ. ಸಾಧನೆ ಮಾಡುವ ಛಲ ಹಾಗೂ ಆತ್ಮವಿಶ್ವಾಸದ ಜೊತೆಗೆ ಪರಿಶ್ರಮವಿರಬೇಕು ಎಂದು ಪದವೀಧರ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಪಿ.ದಿನೇಶ್ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ಪ್ರಾಯ ಎಸ್ಥೆಟಿಕ್ ಇಂಟರ್ನ್ಯಾಷನಲ್ ಕ್ಲಿನಿಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಬೃಂದಾವನ, ಲಕ್ಷ್ಮಿ ನಿವಾಸ
ಹಾಗೂ ಬೇರೆ ಬೇರೆ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಜೊತೆಗೆ ತನ್ನ ಅಮೋಘವಾದ ನಟನೆಯಿಂದ ಅಪಾರ ಜನರ ವೀಕ್ಷಕರ ಮನ ಗೆದ್ದಿರುವ ಪುಟ್ಟ ಕಲಾವಿದೆ ನಿಶಿತ, ಈಗಾಗಲೇ ಯೂಟ್ಯೂಬ್ ನಲ್ಲಿ ಮೂರು ಮಿಲಿಯನ್ ಸಬ್ ಸ್ಕ್ರೈಬರ್ ಹೊಂದಿದ್ದಾರೆ. ಇದು ನಮ್ಮ ನಾಡಿಗೆ ಒಂದು ಹೆಮ್ಮೆಯ ಸಂಗತಿ. ಹಾಗೆ ಮತ್ತೊಬ್ಬ ಕಿರುತೆರೆ ಕಲಾವಿದೆ ಅವರು ಸಹ ಬೃಂದಾವನ, ಧರಣಿ, ಯಜಮಾನ ಹಾಗೂ ಹಲವಾರು ಕಿರುತೆರೆಗಳಲ್ಲಿ ನಟಿಸಿ ಜೊತೆಗೆ ಮಾಡಲಿಂಗ್ ಆಗಿರುವ ದಾಮಿನಿ ದಂದಲ್ಲಿ ಕೂಡ ವಿಶೇಷ ಸಾಧನೆ ಮಾಡಿದ್ದಾರೆ.

ಇವರುಗಳಿಗೆ ಗುರುತಿಸಿ ಗೌರವಿಸಿ ಸನ್ಮಾನಿಸಿದಾಗ ನಮ್ಮ ಸಂಸ್ಥೆಗಳ ಕೀರ್ತಿ ಹೆಚ್ಚುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಪ್ರಾಯ ಆಸ್ಪತ್ರೆಯ ಮಾಲೀಕರು ಹಾಗೂ ವೈದ್ಯರಾದ ಡಾ. ಪ್ರಜ್ವಲ್ ಮಾತನಾಡಿ, ನಮ್ಮ ಆಸ್ಪತ್ರೆ ವೃತ್ತಿಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಸಮಾಜಮುಖಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ. ವೃತ್ತಿ ಹಾಗೂ ಪ್ರವೃತ್ತಿಯನ್ನು ಗೌರವಿಸುತ್ತೇವೆ ಹಾಗೆ ಈ ಎರಡು ಜನ ಕಲಾವಿದರು ಕಿರುತೆರೆ ಹಾಗೂ ಹಿರಿಯ ತೆರೆ ಮೇಲೆ ವಿಶೇಷವಾದ ಸಾಧನೆ ಮಾಡಿ ಅಪಾರ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂತಹ ಕಲಾವಿದರನ್ನು ಪ್ರೋತ್ಸಾಹಿಸಿ ಬೆಂಬಲಿಸಿದಾಗ ಅವರ ಪ್ರತಿಭೆಗಳು ಇನ್ನಷ್ಟು ಅನಾವರಣಗೊಳ್ಳುತ್ತವೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನಿಗೆ ತುಂಬಾ ಅಗತ್ಯ. ಅವಕಾಶಗಳು ನಮ್ಮನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತವೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದಾಮಿನಿ ಹಾಗೂ ನಿಶಿತ ರವರು ಇನ್ನು ಹೆಚ್ಚು ಹೆಚ್ಚು ಕಲಾ ಸೇವೆಗಳ ಮುಖಾಂತರ ಜನಮಾನಸವನ್ನು ತಲುಪಲಿ, ಜೊತೆಗೆ ಅವರಿಂದ ಉತ್ತಮವಾದ ಸಮಾಜ ಸೇವೆಯು ಸಹ ನೆರವೇರಲಿ ಎಂದು ಹಾರೈಸಿದರು.

Aesthetic International Clinic ಈ ವೇಳೆ ವೈದ್ಯರಾದ ಐಶ್ವರ್ಯ ಘಟದ್ ರವರು ಇಬ್ಬರೂ ಕಲಾವಿದರಿಗೆ ಗೌರವ ಸಮರ್ಪಣೆ ಮಾಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಇಬ್ಬರೂ ಕಲಾವಿದರು ತಮ್ಮ ಕಿರುತೆರೆ ಹಾಗೂ ಹಿರೀತರೆ ಅನುಭವಗಳು ಏಳು
-ಬೀಳುವಗಳನ್ನು, ಸಾಧನೆಗಳನ್ನು ಹಂಚಿಕೊಂಡರು. ಹಾಗೂ ಹೊಸ ಹೊಸ ಕಲಾವಿದರಿಗೆ ಟಿಪ್ಸ್ ಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...