Thursday, March 19, 2026
Thursday, March 19, 2026

District Consumer Disputes Redressal Commission ಕಾರು ಸೂಕ್ತ ರಿಪೇರಿಯಲ್ಲಿ ಸೇವಾ ನ್ಯೂನತೆ. ಗ್ರಾಹಕರ ಪರ ತೀರ್ಪು ನೀಡಿದ ಜಿಲ್ಲಾ ಆಯೋಗ

Date:

District Consumer Disputes Redressal Commission ಶ್ರೀ ಗುರುವ ಭೋವಿ ಇವರು ಎದುರುದಾರರಾದ ದಿ ಮ್ಯಾನೇಜರ್ ಕಾವೇರಿ ಮೋಟರ‍್ಸ್ ಪ್ರೈ.ಲಿ, ಶಿವಮೊಗ್ಗ ಹಾಗೂ ಸುನೀಲ್ ಎ ವಿ, ಸರ್ವೀಸ್ ಅಡ್ವೆಂಸರ್, ಕಾವೇರಿ ಮೋಟರ‍್ಸ್ ಪ್ರೈ.ಲಿ, ಶಿವಮೊಗ್ಗ ಇವರುಗಳ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ದೂರುದಾರರು 2015 ನೇ ಇಸವಿಯಲ್ಲಿ ತಾವು ಫೋರ್ಡ್ ಕಾರನ್ನು ಖರೀದಿಸಿದ್ದು, ಕಾರನ್ನು ಯಾವುದೇ ರಿಪೇರಿ ಇಲ್ಲದೇ ಓಡಿಸುತ್ತಿದ್ದು, ದಿ: 11-03-2024 ರಂದು ಕಾರಿನ ರಿಪೇರಿಗಾಗಿ ಎದುರುದಾರರ ಶೋ ರೂಮ್‌ನಲ್ಲಿ ಬಿಟ್ಟಿರುತ್ತಾರೆ. ಎದುರುದಾರರು ರೂ.1,67,532/- ಗಳ ಅಂದಾಜು ರಿಪೇರಿ ವೆಚ್ಚವನ್ನು ನೀಡಿದ್ದು ತದನಂತರ ಸರ್ವಿಸ್ ಚಾರ್ಜಸ್ ರೂ.1,17,935/- ಆಗುತ್ತದೆ ಎಂದು ಹೇಳಿರುತ್ತಾರೆ.

ಆದರೆ ಹಲವು ಬಾರಿ ವಿನಂತಿಸಿದರೂ ರಿಪೇರಿ ಮಾಡಿರುವುದಿಲ್ಲ.
ನಂತರ ಎದುರುದಾರರು ಕಾರ್ ರಿಪೇರಿಯಾಗಿದ್ದಾಗಿ ತಿಳಿಸಿದ್ದರ ಮೇರೆಗೆ ದಿ: 24-04-2024 ರಂದು ಕಾರನ್ನು ತೆಗೆದುಕೊಳ್ಳಲು ಹೋದಾಗ ಟೆಸ್ಟ್ ಡ್ರೈವ್ ಮಾಡಿ ನಂತರ ತೆಗೆದುಕೊಳ್ಳಲು ತಿಳಿಸಿದ್ದು, ಟೆಸ್ಟ್ ಡ್ರೆöÊವ್ ಮಾಡುವ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಹೊಗೆ ಬರಲು ಶುರುವಾಗಿ, ಇಂಜಿನ್‌ಗೆ ಬೆಂಕಿ ತಗುಲಿರುತ್ತದೆ. ನಂತರ ಹಲವಾರು ಬಾರಿ ಕಾರನ್ನು ರಿಪೇರಿ ಮಾಡಿ ಕೊಡಲು ವಿನಂತಿಸಿದರೂ ಎದುರುದಾರರು ಕಾರನ್ನು ರಿಪೇರಿ ಮಾಡಿ ಕೊಡಲು ರೂ.2,00,000/- ಗಳಾಗುತ್ತದೆಂದು ತಿಳಿಸುತ್ತಾರೆ. ಆದರೆ ಕಾರನ್ನು ರಿಪೇರಿ ಮಾಡಿಕೊಟ್ಟಿರುವುದಿಲ್ಲ.

ಆದ ಕಾರಣ ದೂರುದಾರರು ಎದುರುದಾರರಿಗೆ ಲೀಗಲ್ ನೋಟಿಸ್ ಕಳುಹಿಸಿ ಕಾರನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿಕೊಡಲು ಕೋರಿದ್ದರು. ಎದುರುದಾರರು ಅಸಮರ್ಥನೀಯವಾದ ಉತ್ತರವನ್ನು ನೀಡಿದ್ದು, ಕಾರನ್ನು ಸಹ ರಿಪೇರಿ ಮಾಡಿಕೊಟ್ಟಿರುವುದಿಲ್ಲವೆಂದು ಆಯೋಗದ ಮೂದೆ ದೂರನ್ನು ಸಲ್ಲಿಸಿರುತ್ತಾರೆ.

District Consumer Disputes Redressal Commission ದೂರುದಾರರು ಮತ್ತು ಎದುರುದಾರರ ಸಾಕ್ಷಿ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ ಎದುರುದಾರರು ದೂರುದಾರರ ವಾಹನವನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡದೇ ಇರುವುದು ಘಟನೆಗೆ ಕಾರಣವೆಂದು ಆಯೋಗ ತೀರ್ಮಾನಿಸಿ, ದೂರುದಾರರು ಹಿಂದಿನ ರಿಪೇರಿ ಮೊತ್ತ ರೂ.1,17,000/- ಗಳನ್ನು ಈ ಆದೇಶವಾದ 15 ದಿನಗಳ ಒಳಗೆ ಎದುರುದಾರರಿಗೆ ನೀಡಲು ಮತ್ತು ಎದುರುದಾರರು ದೂರುದಾರರಿಂದ ಹಣ ಪಡೆದ 45 ದಿನಗಳ ಒಳಗೆ ದೂರುದಾರರ ವಾಹನವನ್ನು ಸರಿಯಾದ ರೀತಿಯಲ್ಲಿ ತೃಪ್ತಿಕರವಾಗಿ ರಿಪೇರಿ ಮಾಡಿಕೊಡಬೇಕಾಗಿ, ತಪ್ಪಿದಲ್ಲಿ ಎದುರುದಾರರು ದೂರುದಾರರಿಗೆ ಪರಿಹಾರವಾಗಿ ಮಾಸಿಕ ರೂ.10,000/- ಗಳನ್ನು ಕಾರನ್ನು ರಿಪೇರಿ ಮಾಡಿ ವಾಪಸ್ ನೀಡುವವರೆಗೂ ಪಾವತಿಸಲು ಹಾಗೂ ರೂ.10,000/- ಗಳನ್ನು ಮಾನಸಿಕ ಹಾನಿಗೆ ಮತ್ತು ರೂ.10,000/- ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಪ್ಪ ಮತ್ತು ಸದಸ್ಯರಾದ ಬಿ.ಡಿಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಏ.25 ರಂದು ಆದೇಶಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...