Thursday, March 19, 2026
Thursday, March 19, 2026

Klive Special Article ಅಕ್ಷಯ ಫಲ ನೀಡುವ ಅಕ್ಷಯ ತೃತೀಯ

Date:

ಲೇ: ಎನ್.ಜಯ ಭೀಮಜೊಯಿಸ್ ಶಿವಮೊಗ್ಗ

Klive Special Article ವೈಶಾಖ ಮಾಸದ ಶುಕ್ಲಪಕ್ಷದ ಮೂರನೆಯ ದಿನವನ್ನು “ಅಕ್ಷಯತೃತೀಯ”ಎಂದು ಕರೆಯುತ್ತಾರೆ.ಅಕ್ಷಯ ಎಂದರೆ ಹೆಚ್ಚುತ್ತಾ ಹೋಗುವುದು,ಸದಾ ವೃದ್ಧಿಯಾಗುವುದು ಎಂದರ್ಥ.ಇಂದಿನ ದಿನ ಒಳ್ಳೆಯ ಕೆಲಸಗಳನ್ನು ಮಾಡುವುದರ ಮೂಲಕ ಪುಣ್ಯವನ್ನು ಅಕ್ಷಯ ಮಾಡಿಕೊಳ್ಳಬಹುದಾದಂತಹ ದಿನ. ಎಲ್ಲರ ಬಾಳಿನಲ್ಲಿ ಸಂತೋಷ,ನೆಮ್ಮದಿ,ಶಾಂತಿ ಮತ್ತು ಆರೋಗ್ಯಭಾಗ್ಯ ಅಕ್ಷಯವಾಗಲಿ ಎಂಬ ಸದುದ್ದೇಶ ಹೊಂದಿರುವ ದಿನ ಅಕ್ಷಯತೃತೀಯ.
ಅಕ್ಷಯತೃತೀಯದದಿನದವಸ-ಧಾನ್ಯ,ಹಣ,ಹಸಿದವರಿಗೆ ಊಟ ಹೀಗೆಯಾವುದನ್ನು ದಾನವಾಗಿ ನೀಡಿದರೂ ಅದರಿಂದಬರುವ ಪುಣ್ಯದ ಫಲ ಬಹಳವಾಗಿರುತ್ತದೆ. ಇಂದು ಬೆಳ್ಳಿ ಬಂಗಾರದ ಆಭರಣಗಳನ್ನು ಖರೀದಿಸಿದರೆ ಸಂಪತ್ತು ಅಕ್ಷಯವಾಗುತ್ತದೆ ಎಂಬ
ನಂಬಿಕೆಯಿದೆ. ಸಂಪತ್ತು ಅಕ್ಷಯವಾಗುತ್ತದೆ ಎಂದು ಬೆಳ್ಳಿ ಬಂಗಾರ
ವನ್ನು ಸಾಲಮಾಡಿ ತೆಗೆದುಕೊಳ್ಳುವುದು ಅಷ್ಟು ಸೂಕ್ತವಾದ ಯೋಚನೆಯಲ್ಲ.,ಏಕೆಂದರೆ ಸಾಲ
ಮಾಡಿ ಸಂಕಷ್ಟವನ್ನೂಅನುಭವಿಸಬಹುದು.ಹಣದ ಅನುಕೂಲವಿದ್ದವರು ಬೆಳ್ಳಿಬಂಗಾರವನ್ನು ಖರೀದಿಸಬಹುದು.
ವಿದ್ಯಾದಾನವೂ ಬಹಳ ಶ್ರೇಷ್ಠವಾದ ದಾನವಾಗಿ ರುತ್ತದೆ.ಎಲ್ಲಕ್ಕಿಂತ ಅನ್ನದಾನ ಬಹಳ ಮಹತ್ವ
ಪಡೆದಿರುವ ದಾನವಾಗಿರುತ್ತದೆ.ಹಸಿದ ಹೊಟ್ಟೆಗೆ ಅನ್ನ ಉಣಬಡಿಸಿದರೆ ಅಗಾಧವಾದ ಪುಣ್ಯವನ್ನು
ಪಡೆಯಬಹುದು.ಮನುಷ್ಯನಿಗೆಯಾವುದರಿಂದಲೂ ತೃಪ್ತಿಪಡಿಸಲಾಗುವುದಿಲ್ಲ.ಊಟವೊಂದೇ ತೃಪ್ತಿಯಾಗಿಸಾಕೆನಿಸುವುದು.ಅಕ್ಷಯ ತೃತೀಯ ಬರುವ ವೈಶಾಖಮಾಸದಲ್ಲಿ ಬಿಸಿಲಿನ ತಾಪ ಬಹಳ ವಾಗಿರುತ್ತದೆ.ನಿಂಬೆಹಣ್ಣಿನಪಾನಕ,ಮಜ್ಜಿಗೆ,ಒಳ್ಳೆಯ ಕುಡಿಯುವನೀರುಇವುಗಳನ್ನುಬಿಸಿಲಿನಬೇಗೆಯಲ್ಲಿ ಬಳಲಿದವರಿಗೆ ಕೊಟ್ಟರೂ ಅದರಿಂದಲೂ ಪುಣ್ಯದ ಫಲ ಸಂಚಯವಾಗುತ್ತದೆ.
ಈ ದಿನ ಯಾವುದೇ ಶುಭದ ಕೆಲಸವನ್ನು ಪ್ರಾರಂಭ ಮಾಡಿದರೆ ಅದು ಯಾವುದೇ ಅಡೆತಡೆಗಳಿಲ್ಲದೇ
ನಡೆಯುವುದು ಎಂಬ ದೃಢ ನಂಬಿಕೆಯೂ ಇದೆ. ದಶಾವತಾರದ ವಿಷ್ಣುವಿನ ಆರನೇ ಅವತಾರವಾದ
ಪರಶುರಾಮಾವತಾರವಾದ ದಿನ ಮತ್ತು ಮಹಾ ಪುರುಷರಾದ ಶ್ರೀ ಬಸವಣ್ಣನವರು ಜನಿಸಿದ್ದು ಅಕ್ಷಯ ತೃತೀಯದಂದೇ.ಶ್ರೀ ಶಂಕರಾಚಾರ್ಯರು ಕನಕಧಾರಾ ಸ್ತೋತ್ರವನ್ನು ರಚಿಸಿದ್ದೂ ಅಕ್ಷಯ ತದಿಗೆಯಂದೇ.ಬಾಲ್ಯದ ಗೆಳೆಯರಾಗಿದ್ದ ಶ್ರೀಕೃಷ್ಣ ಸುಧಾಮರು ಭೇಟಿಯಾಗಿತಮ್ಮ ಬಾಲ್ಯದ ದಿನಗಳನ್ನುಮೆಲುಕುಹಾಕಿದದಿನವೂಇಂದೇ.
ಶ್ರೀವೇದವ್ಯಾಸರುಗಣೇಶನಿಂದಮಹಾಭಾರತವನ್ನು ಬರೆಸಿದ ದಿನವೂ ಅಕ್ಷಯತೃತೀಯ ದಿನವಾಗಿದೆ.
ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಈ ದಿನದಂದೇ ಆಗಿದೆ.ಅಕ್ಷಯಪಾತ್ರೆಯು ಸುಭಿಕ್ಷವಾಗಿ ಆಹಾರವನ್ನುನೀಡುವಪಾತ್ರೆಯಾಗಿದೆ.ಅಕ್ಷಯಪಾತ್ರೆಯಲ್ಲಿ ಆಹಾರ ಎಂದಿಗೂ ಬರಿದಾಗುವುದೇ ಇಲ್ಲ.
ಈ ದಿನ ಜೈನಬಂಧುಗಳಿಗೂ ಅತ್ಯಂತ ಪವಿತ್ರವಾದ ದಿನವಾಗಿರುತ್ತದೆ. ಏಕೆಂದರೆ ಜೈನ ತೀರ್ಥಂಕರರಾದ ಋಷಭದೇವ ಉಪವಾಸವ್ರತವನ್ನುಸಂಪೂರ್ಣಗೊಳಿಸಿದ ದಿನವಾಗಿರುತ್ತದೆ. ಚಾರ್ ಧಾಮಗಳಲ್ಲಿ ಒಂದಾದಬದರೀಕ್ಷೇತ್ರದಲ್ಲಿಶ್ರೀಬದರಿನಾರಾಯಣನ ದರ್ಶನಕ್ಕೆ ದೇವಸ್ಥಾನದ ಬಾಗಿಲು ತೆಗೆಯುವುದು ಅಕ್ಷಯತೃತೀಯ ದಿವಸದಂದೇ.
ಇಂದು ವಿವಾಹಮುಂತಾದಮಂಗಳಕಾರ್ಯಗಳನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಜೀವನದಲ್ಲಿಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲವೆಂಬದೃಢವಾದ ನಂಬಿಕೆ ಇದೆ.
ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ಖರೀದಿಸಿ ಜ್ಞಾನ ಸಂಪಾದನೆಯನ್ನು
ವೃದ್ಧಿಸಿಕೊಳ್ಳ ಬಹುದು. ಸಹಾಯದ ಅಗತ್ಯವಿರುವವರಿಗೆ ಕೈಲಾದ ಸಹಾಯ ಮಾಡಿ ಪುಣ್ಯಸಂಪಾದಿಸಿಕೊಳ್ಳಬಹುದು.
ಈ ಅಕ್ಷಯ ತೃತೀಯ ಶುಭದಿನದಂದು ಒಳ್ಳೆಯ ಕೆಲಸಗಳನ್ನು ಮಾಡುವ ಸಂಕಲ್ಪ ಮಾಡಿ ಅದರಂತೆ
ನಡೆದರೆ ಅಕ್ಷಯ ತೃತೀಯ ಹಬ್ಬದ ಆಚರಣೆ ಅರ್ಥ ಪೂರ್ಣವಾಗುವುದರಲ್ಲಿ ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...