Thursday, December 18, 2025
Thursday, December 18, 2025

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Date:

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು ಸ್ಥಾಪಿಸಿದ ಮಹಾನುಭಾವರು . ಶ್ರೀ ಚಿದಂಬರಾಶ್ರಮವು ಸುಮಾರು 90 ವರ್ಷಗಳ ಇತಿಹಾಸ ಹೊಂದಿರುವಂತಹ ಪುಣ್ಯಕ್ಷೇತ್ರವಾಗಿದೆ. ಶ್ರೀ ಚಿದಂಬರ ಗುರುಗಳು ಮಕ್ಕಳಿಗೆ ಸಾಂಪ್ರದಾಯಿಕ ಸಂಸ್ಕೃತಿಯನ್ನು, ಅಕ್ಷರ ಜ್ಞಾನವನ್ನು, ಜೀವನ ಕೌಶಲ್ಯಗಳನ್ನು ಕಲಿಸುವ ಸಮಗ್ರ ಶಿಕ್ಷಗಣದ ಪ್ರವರ್ತಕರು .
ಪ್ರಸ್ತುತ ಸೇವಾ ಸದನ ಶಿಕ್ಷಣ ಸಂಸ್ಥೆ, ಶ್ರೀ ಚಿದಂಬರಾಶ್ರಮ , ಗುಬ್ಬಿ ಇದರ ಅಡಿಯಲ್ಲಿ 4 ಶಾಲೆಗಳಿದ್ದು ಸುಮಾರು 600 ಜನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ 2025 – 26 ನೇ ಸಾಲಿನಲ್ಲಿ ಸೇವಾ ಸದನ ಶಿಕ್ಷಣ ಸಂಸ್ಥೆಯ / ಚಿದಂಬರ ರಿಸರ್ಚ್ ವತಿಯಿಂದ ವಿಶೇಷವಾಗಿ “ಎಲೆಕ್ಟ್ರಿಷಿಯನ್ ಉಚಿತ ತರಬೇತಿ ಕಾರ್ಯಾಗಾರ “ವನ್ನು ಆಯೋಜಿಸಲಾಗಿದೆ . ಈ ಕಾರ್ಯಾಗಾರಕ್ಕೆ S S L C ಉತ್ತೀರ್ಣ ಹಾಗು ಅನುತ್ತೀರ್ಣ ವಿದ್ಯಾರ್ಥಿಗಳು , P U C ಉತ್ತೀರ್ಣ ಹಾಗು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಕಾರ್ಯಾಗಾರದ ಉದ್ದೇಶ ಯುವಕರು ಎಲೆಕ್ಟ್ರಿಕ್ ಟ್ರೇಡ್ ಅನ್ನು ಕಲಿತು ಸ್ವಯಂ ವೃತ್ತಿ ಕೈಗೊಳ್ಳಲು ಸಸಹಾಯ ಮಾಡುವುದು. ಈ ಕಾರ್ಯಾಗಾರವನ್ನು ಮೇ 1 . 2025 ರಿಂದ May ಕೊನೆಯವರಿಗೆ . ರವರೆಗೆ ನಡೆಸಲಾಗುತ್ತದೆ. ಈ ಎಲೆಕ್ಟ್ರೀಷಿಯನ್ ವೃತ್ತಿ ತರಬೇತಿಯನ್ನು ಕಲಿಕಾರ್ಥಿಗಳಿಗೆ ಅನುಭವವುಳ್ಳ ತಜ್ಞರಿಂದ ಬೋಧನೆ ಮತ್ತು ಎಲೆಕ್ಟ್ರಿಕಲ್ ಸಾಧನಗಳಿಂದ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ.
ಈ ಕಾರ್ಯಾಗಾರದಲ್ಲಿ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಸರ್ಕ್ಯೂಟುಗಳ ಮೂಲಗಳು,ಪ್ರಾಯೋಗಿಕ ಕೌಶಲ್ಯಗಳ ಅಭಿವೃದ್ಧಿ ಸುಧಾರಿತ ವೈರಿಂಗ್ ಮತ್ತು ಅನುಸ್ಥಾಪನ ತಂತ್ರಗಳು , ಉದ್ಯೋಗದ ಸಿದ್ಧತೆ ಇನ್ನಿತರ ವಿಷಯಗಳನ್ನು ಕಲಿಸಲಾಗುತ್ತದೆ.
ಇಂತಹ ಉಚಿತ ತರಬೇತಿಯ ಅವಕಾಶ ಸಿಗುವುದು ಅಪರೂಪ . ಹಾಗಾಗಿ ಈ ಸದವಕಾಶದ ಬಗ್ಗೆ ಸರ್ವರಿಗೂ ಮಾಹಿತಿ
ನೀಡಬೇಕಾಗಿ ಪ್ರಾರ್ಥನೆ.
ಡಾ|| ಸಚ್ಚಿದಾನಂದ ಶರ್ಮ Sri Chidambara Mahaswami ನೋಂದಣಿ ಉಚಿತವಾಗಿರುತ್ತದೆ. ಹೆಚ್ಚಿನ ವಿವರಗಳನ್ನು ಈ ಕೆಳಕಂಡ ವಿಳಾಸಕ್ಕೆ ಭೇಟಿ ನೀಡಿ ಪಡೆಯಬಹುದು.
ಸೇವಾ ಸದನ ಶಿಕ್ಷಣ ಸಂಸ್ಥೆ, ಶ್ರೀ ಚಿದಂಬರಾಶ್ರಮ, ಗುಬ್ಬಿ ಮತ್ತು ಈ ಕಾರ್ಯಕ್ರಮದ ಸಂಯೋಜಕರಾದ ಸೇವಾ ಸದನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಎ. ಬಿ . ಜಗದೀಶ್ ರವರನ್ನು ಸಂಪರ್ಕಿಸಬಹುದು.
Ph No : 9740234225
Email : abjkallumane@gmail.com

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...