Monday, May 25, 2026
Monday, May 25, 2026

JCI and Cultural Club ಕ್ರೀಡೆಯಿಂದ ದೈಹಿಕ & ಮಾನಸಿಕ ಆರೋಗ್ಯ ವೃದ್ಧಿ- ಹೆಚ್.ಎಸ್.ಸುಂದರೇಶ್

Date:

JCI and Cultural Club ಜೆಸಿಐ ಅಂಡ್ ಕಲ್ಚರಲ್ ಕ್ಲಬ್ ವಲಯ 24ರ ಬಾಕ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್ ಪಟ್ಟ ಹಾಗೂ 15,000 ನಗದು ಬಹುಮಾನವನ್ನು ಪಡೆದು ಜಿಲ್ಲೆಗೆ ಗೌರವ ತಂದಿದೆ. ಈ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಇಪ್ಪತ್ತು ಹೆಚ್ಚು ತಂಡಗಳು ಭಾಗವಹಿಸಿದ್ದು ಶಿವಮೊಗ್ಗ ಜೆಸಿಐ ಸಹ್ಯಾದ್ರಿ ತಂಡ ಅತ್ಯುತ್ತಮ ಆಟದ ಪ್ರದರ್ಶನ ನೀಡಿ ಅಪಾರ ಜನ ಮೆಚ್ಚಿಗೆ ಪಾತ್ರರಾಗಿ ಚಾಂಪಿಯ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಸೂಡಾ ಅಧ್ಯಕ್ಷರಾದ ಸುಂದರೇಶ್ ಅವರು ಮಾತನಾಡುತ್ತಾ ಕ್ರೀಡೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಪರಸ್ಪರ ಒಡನಾಟ ಹಾಗೂ ಕ್ರೀಡಾಮನೋಭಾವನೆ ವೃದ್ಧಿಯಾಗುತ್ತದೆ. ಶಿವಮೊಗ್ಗ ಜಿಲ್ಲೆ ಕ್ರೀಡೆಗಳಿಗೆ ಒಂದು ತವರೂರು ಇಲ್ಲಿ ಸಾಕಷ್ಟು ಜನ ರಾಜ್ಯ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಾರೆ ಎಂದು ನುಡಿದರು. JCI and Cultural Club ಇದೇ ಸಂದರ್ಭದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯ ಕೆ ವಿ ವಸಂತ್ ಕುಮಾರ್ ಅವರು ಮಾತನಾಡುತ್ತ ಜೆಸಿಐ ಸಂಸ್ಥೆ ಸಮಾಜ ಮುಖಿಯಾಗಿ ಹಲವಾರು ಗುರುತರ ಸೇವಾ ಯೋಜನೆಗಳನ್ನು ಮಾಡುವುದರ ಮುಖಾಂತರ ಪ್ರಪಂಚಾದ್ಯಂತ ತನ್ನದೇ ಆದ ಹೆಸರು ಗಳಿಸಿದೆ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗು ಕ್ರೀಡೆಗೆ ಒಳ್ಳೆಯ ವಾತಾವರಣವನ್ನು ಕಲ್ಪಿಸಿದೆ ಎಂದು ನುಡಿದರು. ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷರಾದ ಜೀವಿ ಗಣೇಶ್ ತಮ್ಮ ತಂಡದೊಂದಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಸ್ವೀಕರಿಸಿ ಸಂಭ್ರಮಿಸಿದರು ಸಮಾರಂಭದಲ್ಲಿ ಜೆಸಿ ವಲಯ ಅಧ್ಯಕ್ಷ ಭಾರ್ಗವ್. ಅನುಶ್ ಗೌಡ. ಅಂಜಲಿ ಕಾತರಕಿ ಜೆ ಸಿ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಡಿ.ಶ್ರೀನಾಗ್. ಮೋಹನ್ ಕಲ್ಪತರು. ನವೀನ್ ತಲಾರಿ. ಗಾರಾ ಶ್ರೀನಿವಾಸ್. ಪರಮೇಶ್ವರ್. ಸುದರ್ಶನ್ ತಾಯಿ ಮನೆ. ಸುಗುಣ ಸತೀಶ್. ಪೂರ್ಣಿಮಾ ಸುನಿಲ್
ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಬಿಎನ್. ಮ್ಯಾನ್ ಆಫ್ ದಿ ಮ್ಯಾಚ್. ಜೆಸಿಎ ಉಮಾಮಣಿ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿಗೆ ಬಾಜನರಾಗಿದ್ದಾರೆ.ಜೆಸಿ ಹರ್ಷ. ಜೆಸಿ ಈಶ್ವರ್ ಬೂದಾಳ್ ಜೆಸಿ ಸಿ ಕೆ ವಿಜಯಕುಮಾರ್ . ಜೆಸಿ ಸಿಂಚನ. ಜೆಸಿ ಚಂದ್ರ. ಪ್ರಕಾಶ್ ಬೆಸ್ಟ್ ಬ್ಯಾಟ್ಸ್ಮನ್ ಬೆಸ್ಟ್ ಫೀಲ್ಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...

Madhu Bangarappa ಶಿವಮೊಗ್ಗಕ್ಕೆ ಜೂನ್ 1 ರಂದು ಸೀಎಮನ ಭೇಟಿ: ಮಧು ಬಂಗಾರಪ್ಪ ಅವರಿಂದ ಪೂರ್ವಸಿದ್ಧತೆ ಪರಿಶೀಲನೆ

Madhu Bangarappa ಜೂನ್ 01 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ನೆರವೇರಿಸಲಿರುವ...

Madhu Bangarappa ಜಿಲ್ಲಾ ಪ್ರಗತಿ ಪರಿಶಿಲನಾ ಸಭೆ. ವಿವಿಧ ಸಮಸ್ಯೆಗಳ ಬಗ್ಗೆ ಪಕ್ಷಾತೀತ ನಿರ್ಣಯ- ಮಧು ಬಂಗಾರಪ್ಪ.

Madhu Bangarappa ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ...

CM Siddharamaiah ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ- ಸಿದ್ಧರಾಮಯ್ಯ

CM Siddharamaiah ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ,...