Sunday, December 7, 2025
Sunday, December 7, 2025

Rotary Club Shimoga ಪ್ರಾಥಮಿಕ ಹಂತದಲ್ಲಿಯೇ ಸಂಸ್ಕೃತವನ್ನ ಮಕ್ಕಳಿಗೆ ಕಲಿಸುವ ಯತ್ನ ಆಗಬೇಕು-ವಿಮಲಾ ರೇವಣಕರ್

Date:

Rotary Club Shimoga ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಕೊಡುಗೆ ಅಪಾರ, ಋಷಿಮುನಿಗಳು ತಾಳೆಗರಿಗಳಲ್ಲಿ ಬರೆದಿಟ್ಟಿರುವ ಇತಿಹಾಸಗಳು ಹಾಗೂ ಖಗೋಳ ವಿಸ್ಮಯಗಳು ಇರುವುದು ಸಂಸ್ಕೃತದಲ್ಲಿ. ಇದನ್ನು ದೇವ ಭಾಷೆಯೆಂದು ಕರೆಯಲಾಗುತ್ತದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ವಾರದ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಮಲ ರೇವಣ್ ಕರ್ ರವರು ಮಾತನಾಡುತ್ತಿದ್ದರು.
ಎಲ್ಲಾ ಭಾಷೆಗಳ ಪಿತಾಮಹ ಎಂದು ಸಂಸ್ಕೃತಕ್ಕೆ ಹೆಸರಿದೆ, ವಿಶ್ವದಭಾಷೆಯಾಗಿತ್ತು. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಲು ವಿದೇಶಗಳಿಂದ ವಿದ್ಯಾರ್ಥಿಗಳು ಆಗಮಿಸಿ ವೇದ ಕಲಿಯುತ್ತಿದ್ದರೆಂದು ಇತಿಹಾಸವಿದೆ. ನಮ್ಮ ನಾಡಿನ ವಿವಿದ ಇತಿಹಾಸ ಪ್ರಸಿದ್ದ ಮಹಾಕಾವ್ಯ ಗಳು ಮೂಡಿರುವುದು ಸಂಸ್ಕೃತದಲ್ಲಿ.
ಬ್ರಿಟಿಷರು ಆಂಗ್ಲಭಾಷೆ ಅಭಿವೃದ್ಧಿ ಪಡಿಸಲು ನಮ್ಮ ಭಾಷೆಗಳಿಗೆ ಮಾನ್ಯತೆ ನೀಡಲಿಲ್ಲ. ಇಂದು ಕೇವಲ ಪೂಜೆ, ಪುನಸ್ಕಾರಗಳಿಗೆ ಈ ಭಾಷೆ ಉಪಯೋಗ ಆಗುತ್ತಿದೆ ಎಂದುಕೊಂಡಿದ್ದೇವೆ. ವಿಶ್ವದ ಹಲವಾರು ವಿಜ್ಞಾನಿಗಳು, ಇದರ ಸಾರ ತಿಳಿದುಕೊಳ್ಳಲು ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಈಗಲು ಬಳಸಿ ಕೊಳ್ಳುತ್ತಿದ್ದಾರೆ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತಾಗಿ ನಾವು, ಈ ಭಾಷೆಗೆ ಹೆಚ್ಚಿನ ಮಾನ್ಯತೆ ನೀಡುತ್ತಿಲ್ಲ, ಇದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಟ್ಟು ಹೊಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಜಾತಿಯ ಅಡೆತಡೆಗಳಿಲ್ಲ, ಧರ್ಮ, ಶಾಂತಿ, ಪ್ರಾರ್ಥನೆ, ಧ್ಯಾನ ಇವೆಲ್ಲ ಸಂಸ್ಕೃತ ಪದಗಳು. ಹಿಗೆ ಎಲ್ಲಾ ಭಾಷೆಯಲ್ಲಿ ಸಂಸ್ಕೃತ ಬೆರೆತಿದೆ. ಮತ್ತೂರು ಗ್ರಾಮದಲ್ಲಿ ಎಲ್ಲರೂ ಸಂಸ್ಕೃತ ದಲ್ಲಿ ಮಾತನಾಡುತ್ತಾರೆ. ಉಳಿಸಿಬೆಳೆಸಲು ಪಠಾಮಿ ಸಂಸ್ಕೃತಂ ಆನ್ ಲೈನ್ ನಲ್ಲಿ ಮಾತನಾಡುವುದನ್ನು, ಮುವತ್ತೈದು ಕಡೆ ಬಾಲಗೋಕುಲಗಳಲ್ಲಿ ಮಕ್ಕಳಿಗೆ ಸಂಸ್ಕೃತ ಅಭ್ಯಾಸ ಮಾಡಿಸಲಾಗುತ್ತಿದೆ. ನಮ್ಮ ಭಾಷೆಗಳೊಂದಿಗೆ ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಈ ಭಾಷೆ ಕಲಿಸಿದರೆ, ಬುದ್ದಿ ಶಕ್ತಿ ಚುರುಕೊಂಡು, ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಲು ಸಾಧ್ಯ ಎಂದರು.
Rotary Club Shimoga ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಅಶ್ವಥ್ ವಂದಿಸಿದರು, ಸತ್ಯನಾರಾಯಣ್, ನಾಗರಾಜ್, ರೇವಣಸಿದ್ದಪ್ಪ, ರೇಣುಕಾರಾದ್ಯ ವಾಗೇಶ್, ರಾಜಶೇಖರ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...