Thursday, September 17, 2026
Thursday, September 17, 2026

Youth Hostels Association of India ಧೈರ್ಯ & ಆತ್ಮ ವಿಶ್ವಾಸವಿದ್ದರೆ ಎಲ್ಲಿಯೂ‌ ತೊಡಕಾಗದು- ಎಸ್.ಕೆ.ಶೇಷಾಚಲ

Date:

Youth Hostels Association of India ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ಹೆದರಿಕೆ ಎಂಬುದು ಸ್ವಾಭಾವಿಕ ಅದೇ ಕಾರಣಕ್ಕಾಗಿ ನಾವು ಅನೇಕ ಬಾರಿ ನಮ್ಮ ಗುರಿಯನ್ನು ತಲುಪುವುದಿಲ್ಲ ಧೈರ್ಯವಿದ್ದರೆ ಆತ್ಮವಿಶ್ವಾಸವಿದ್ದರೆ ಎಲ್ಲಿಯೂ ತೊಡಕಾಗುವುದಿಲ್ಲ ಎಂದು ವಾಸವಿ ಅಡ್ವೆಂಚರ್ ಕ್ಲಬ್ ನ ಕಾರ್ಯದರ್ಶಿ ಎಸ್ ಕೆ ಶೇಷಾಚಲ ರವರು ತಿಳಿಸಿದರು

ಅವರು ಶಿವಮೊಗ್ಗ ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕ ಹಾಗೂ ವಾಸವಿ ಅಡ್ವೆಂಚರ್ ಕ್ಲಬ್ ಶಿವಮೊಗ್ಗ ಇವರ ಸಹಯೋಗದಲ್ಲಿ ನಗರದ ಗುಡ್ಡೆ ಮರಡಿ ಗುಡ್ಡದಲ್ಲಿ ರಾಕ್ ಕ್ಲೈಂಬಿಗ್ ಮಾಡುವ ಸಾಹಸ ಕಾರ್ಯಕ್ರಮವನ್ನು ತಾವೇ ಬಂಡೆ ಇಳಿಯುವ ಮೂಲಕ ಉದ್ಘಾಟಿಸ ಮಾತನಾಡುತ್ತ ಇವತ್ತು ನನ್ನ ಅನುಭವ ಮತ್ತು ನಮ್ಮ ಮಕ್ಕಳ ಅನುಭವ ಇಂತಹ ಸಾಹಸ ಚಟುವಟಿಕೆಗಳು ಮನುಷ್ಯನ ದೈನಂದಿಕ ಜೀವನಕ್ಕೆ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮೂಡಿಸುತ್ತದೆ ಎಂದರು.

ಪ್ರವಚನಗಳು ಅದೊಂದು ನಿತ್ಯ ಒಂದು ಪರಿಪಾಠ ಆದರೆ ನದಿಯಲ್ಲಿ ಹೋಗುವುದು, ಟ್ರಕಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮ ಆರೋಗ್ಯ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ ಎಂದರು.

Youth Hostels Association of India ಈ ನಿಟ್ಟಿನಲ್ಲಿ ವಾಸವಿ ಪಬ್ಲಿಕ್ ಶಾಲೆ ಈ ಪ್ರಯತ್ನದಲ್ಲಿ ಸದಾ ಮುಂದಿದೆ ಅನೇಕ ಟ್ರಕ್ಕಿಂಗ್ ಗಳು ತುಂಗಾ ನದಿಯಲ್ಲು ಬೋಟ್ ಮುಲಕ ಸ್ವಾತಂತ್ರ್ಯ ದಿನಾಚರಣೆಯ ಅಚರಣೆ, ವಿಶೇಷವಾಗಿ ಹಿಮಾಲಯ ಚಾರಣ ನಡೆಸಿ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವನೆ ಮೂಡಿಸುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ಕಾರ್ಯಾಧ್ಯಕ್ಷರಾದ ಎಸ್.ಎಸ್.ವಾಗೇಶ್,
ಸಾಹಸ ಮತ್ತು ಸಂಸ್ಕೃತ ಅಕಾಡೆಮಿ ತರಬೇತುದಾರರ ಪಾಟೀಲ್ , ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಮತ್ತೂರಿನ ಶ್ರೀನಿಧಿ, ವಾಸವಿ ಅಡ್ವೆಂಚರ್ ಕ್ಲಬ್ಬಿನ ಪದಾಧಿಕಾರಿಗಳಾದ ಹಾಲಪ್ಪ, ಶ್ಯಾಮ್ ಸುಂದರ್, ಸ್ವರೂಪ್ ಮತ್ತು ಅಕಾಡೆಮಿ ಸದಸ್ಯರು ಹಾಗೂ ವಾಸವಿ ಶಾಲೆಯ ಪ್ರಾಂಶುಪಾಲ ಮನುಬಿಸೆ, ಗುಡ್ಡೆ ಮರಡಿ ದೇವಾಲಯದ ಕಾರ್ಯದರ್ಶಿ ಸತೀಶ್ ಪಟೇಲ್ ಹಾಗೂ ವಾಸವಿ ಶಾಲೆಯ ಶಿಕ್ಷಕರು ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...